This is the title of the web page
This is the title of the web page

Live Stream

[ytplayer id=’1198′]

December 2025
T F S S M T W
 123
45678910
11121314151617
18192021222324
25262728293031

| Latest Version 8.0.1 |

ದಾವಣಗೆರೆ

ಭ್ರಷ್ಟ BEO ನನ್ನು ಲೋಕಾಯುಕ್ತ ಬಲೆಗೆ ಕೆಡವಿದ ಶಾಲಾ ಅಧ್ಯಕ್ಷ – 15 ಸಾವಿರ ರೂಪಾಯಿ ತೆಗೆದುಕೊಳ್ಳುವಾಗ ಟ್ರ್ಯಾಪ್…..

ಭ್ರಷ್ಟ BEO ನನ್ನು ಲೋಕಾಯುಕ್ತ ಬಲೆಗೆ ಕೆಡವಿದ ಶಾಲಾ ಅಧ್ಯಕ್ಷ – 15 ಸಾವಿರ ರೂಪಾಯಿ ತೆಗೆದುಕೊಳ್ಳುವಾಗ ಟ್ರ್ಯಾಪ್…..
WhatsApp Group Join Now
Telegram Group Join Now

ದಾವಣಗೆರೆ

ಹೌದು ಶಾಲೆಯೊಂದರ CBSE ಮಾನ್ಯತೆ ನವೀಕರಣ ಮಾಡಿಕೊಡಲು 15 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ BEO ರೊಬ್ಬರು ಲೋಕಟಯುತ್ತ ಬಲೆಗೆ ಬಿದ್ದ ಘಟನೆ ದಾವಣಗೆರೆ ಯಲ್ಲಿ ನಡೆದಿದೆ.ಹರಿಹರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಿ ಸಿ ಸಿದ್ದಪ್ಪ ಲೋಕಾಯುಕ್ತ ಬಲೆಗೆ ಬಿದ್ದವರಾಗಿದ್ದಾರೆ.

ಸಧ್ಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡತಾ ಇದ್ದಾರೆ.ಹರಿಹರ ಪಟ್ಟಣದ ಕೆ. ಆರ್. ನಗರದ ಶ್ರೀ ದುರುಗೋಜಿ ಗೋಪಾಲರಾವ್ ಎಜುಕೇಶನಲ್ ಆಯಂಡ್‌ ಚಾರಿಟೇಬಲ್ ಟ್ರಸ್ಟ್‌ ನ ಚೇರ್ಮನ್ ಡಿ. ರಘುನಾಥ್ ಎನ್ನುವವರು ತಮ್ಮ ವಿದ್ಯಾದಾಯಿನಿ ಶಾಲೆಯ ಸಿ.ಬಿ.ಎಸ್.ಇ. ಮಾನ್ಯತೆ ನವೀಕರಣಕ್ಕಾಗಿ ಆನ್‌ಲೈನ್‌ನಲ್ಲಿ ದಾಖಲೆ ಸಲ್ಲಿಸಿದ್ದರು.

ಹರಿಹರ ಬಿ.ಇ.ಓ. ಕಚೇರಿಯಿಂದ ಸರ್ಟಿಫಿಕೇಟ್ ಆಫ್ ರೆಕಗ್ನಿಷನ್ ಅಪೆಂಡಿಕ್ಸ್ 15 ನಮೂನೆ ಯಲ್ಲಿ ಭರ್ತಿ ಮಾಡಿಕೊಡಲು ಹಾಗೂ ಶಾಲಾ ಶುಲ್ಕ ನಿಗದಿ ಮಾಡಿಕೊಡಲು ಮನವಿ ಸಲ್ಲಿಸಿದ್ದ ರು.ಇದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಸಿ. ಸಿದ್ದಪ್ಪ 50,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು

ಕಳೆದ ಡಿಸೆಂಬರ್‌ 13 ನೇ ತಾರೀಖಿನಂದು ಮುಂಗಡವಾಗಿ 10 ಸಾವಿರ ರೂಪಾಯಿ ಪಡೆದಿದ್ದ ಸಿದ್ದಪ್ಪ ಡಿಸೆಂಬರ್‌ 28ರಂದು 30,000 ರೂಪಾಯಿ ಕೊಡಲು ಬೇಡಿಕೆ ಇಟ್ಟಿದ್ದರು. ಡಿಸೆಂಬರ್‌ 29ರಂದು ಮಧ್ಯಾಹ್ನ ಡಿ. ರಘುನಾಥ್ ಅವರಿಂದ 15,000 ರೂಪಾಯಿ ಲಂಚ ಪಡೆಯು ವಾಗ ದಾವಣಗೆರೆ ಲೋಕಾಯುಕ್ತ ಘಟಕದ ಪೊಲೀಸ್ ಆಧೀಕ್ಷಕ ಎಂ.ಎಸ್.ಕೌಲಾಪುರರವರ ನೇತೃತ್ವದಲ್ಲಿ ಅಧಿಕಾರಿಗಳು ಸಿಬ್ಬಂದಿ ದಾಳಿ ನಡೆಸಿ ರೆಡ್‌ಹ್ಯಾಂಡ್ ಆಗಿ ಹಿಡಿದು ಹಣವನ್ನು ವಶಕ್ಕೆ ಪಡೆದಿದ್ದಾರೆ.

ಡಿವೈಎಸ್‌ಪಿ ಕೆ. ಜಿ. ರಾಮಕೃಷ್ಣ, ಪೊಲೀಸ್ ಇನ್ಸ್ಪೆಕ್ಟರ್ ಆಂಜನೇಯ ಎನ್.ಹೆಚ್, ಹೆಚ್. ಎಸ್.ರಾಷ್ಟ್ರಪತಿ, ಸಿಬ್ಬಂದಿ ಚಂದ್ರಶೇಖರ್, ಆಂಜನೇಯ, ಧನರಾಜ್‌, ಮುಜೀಬ್ ಖಾನ್, ಬಸವರಾಜ್, ಮೋಹನ್‌ಕುಮಾರ್‌ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.

ಸುದ್ದಿ ಸಂತೆ ನ್ಯೂಸ್ ದಾವಣಗೆರೆ…..


Google News

 

 

WhatsApp Group Join Now
Telegram Group Join Now
Suddi Sante Desk