ಭೀಕರ ಅಪಘಾತ ನಡೆದ ಸ್ಥಳದಲ್ಲೇ ಮತ್ತೊಂದು ಅಪಘಾತ – ತೆಗ್ಗಿಗೆ ಬಿದ್ದ ಕಾರು ಅದೃಷ್ಟವಶಾತ್ ಕಾರಿನಲ್ಲಿದ್ದವರು ಪಾರು

Suddi Sante Desk

ಧಾರವಾಡ –

ಭೀಕರ ರಸ್ತೆ ಅಪಘಾತ ನಡೆದ ಧಾರವಾಡದ ಇಟಿಗಟ್ಟಿ ಬಳಿಯ ಹೆದ್ದಾರಿಯಲ್ಲಿ ಮತ್ತೊಂದು ಅಪಘಾತ ನಡೆದಿದೆ. 11 ಜನರನ್ನು ಬಲಿ ತೆಗೆದುಕೊಂಡ ಕಿಲ್ಲರ್ ಹೆದ್ದಾರಿಯ ಜಾಗದಲ್ಲಿ ಮತ್ತೊಂದು ಅಪಘಾತ ನಡೆದಿದೆ.

ಮೊನ್ನೆ ನಡೆದ ಜಾಗದಲ್ಲಿಯೇ ಮತ್ತೊಂದು ಅಪಘಾತ ನಡೆದಿದೆ‌. ಕಾರೊಂದು ವೇಗವಾಗಿ ಹೊರಟಿತ್ತು ಹೆದ್ದಾರಿಯಲ್ಲಿ ಮಧ್ಯದಲ್ಲಿ ಎಮ್ಮೆಯೊಂದು ಅಡ್ಡಲಾಗಿ ಬಂದಿದೆ ಅಯ್ಯೋ ಇನ್ನೇನು ಎಮ್ಮೆಗೆ ಕಾರು ಡಿಕ್ಕಿಯಾಗಿ ಅಪಘಾತವಾಗುತ್ತದೆ ಎಂದುಕೊಂಡು ತಪ್ಪಿಸಲು ಮುಂದಾಗಿದ್ದಾರೆ.

ದನವನ್ನು ತಪ್ಪಿಸಿದ ಕಾರು ಹೆದ್ದಾರಿ ಪಕ್ಕದ ದೊಡ್ಡ ತೆಗ್ಗಿಗೆ ಬಿದ್ದಿದೆ. ಒಂದು ಅಪಘಾತ ತಪ್ಪಿಸಲು ಹೋಗಿ ಮತ್ತೊಂದು ಅಪಘಾತವಾಗಿದೆ.ಅದೃಷ್ಟವಶಾತ್ ಸಮಯ ತುಂಬಾ ತುಂಬಾ ಚನ್ನಾಗಿದೆ. ಕಾರಿನಲ್ಲಿದಗದವರು ಪಾರಾಗಿದ್ದಾರೆ.

ಕಾರು ಮೂರು ನಾಲ್ಕು ಕಾರುಗಳಿಗೆ ಡಿಕ್ಕಿಯಾಗಿ ಕೊನೆಗೆ ರಸ್ತೆಯ ಪಕ್ಕದ ದೊಡ್ಡ ತೆಗ್ಗಿಗೆ ಬಿದ್ದಿದೆ. ಘಟನೆಯಲ್ಲಿ ಮೂರು ನಾಲ್ಕು ಕಾರುಗಳು ಜಖಂ ಆಗಿವೆ.

ಮೊನ್ನೆ ಮೊನ್ನೆ ನಡೆದ ಭೀಕರ ರಸ್ತೆ ಅಪಘಾತವನ್ನು ಇನ್ನೂ ಯಾರು ಮರೆತಿಲ್ಲ ಅಲ್ಲದೇ ಇತ್ತ ಕಾಂಗ್ರೆಸ್ ಪಕ್ಷದವರು ಸೇರಿದಂತೆ ಕೆಲಗೇರಿ ನಿವಾಸಿಗಳು ಹೀಗೆ ಎಲ್ಲರೂ ವಿಸ್ತರಣೆ ಮಾಡುವಂತೆ ಹೋರಾಟ ಮಾಡಿದ್ದು ಈಗ ಇವೆಲ್ಲದರ ನಡುವೆ ಮತ್ತೊಂದು ಅಪಘಾತವಾಗಿದೆ.

ಒಟ್ಟಾರೆ ಮತ್ತೊಂದು ದೊಡ್ಡ ಪ್ರಮಾಣದ ದುರಂತವೊಂದು ತಪ್ಪಿದ್ದು ಇನ್ನಾದರೂ ಎಚ್ಚೆತ್ತುಕೊಂಡು ಕೇಂದ್ರ ಸರ್ಕಾರ ವಿಸ್ತರಣೆಗೆ ಮುಂದಾಗುತ್ತಾರೆನಾ ಕಾದು ನೋಡಬೇಕು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.