ಬೆಂಗಳೂರು –
ರಾಜ್ಯದಲ್ಲಿ ಶಾಲಾ ಸಮಯ ಬದಲಾವಣೆ ಇನ್ನೂ ಗೊಂದಲ – ನ್ಯಾಯಾಲಯ ಮೆಟ್ಟೇಲೆರಿದ ಶಾಲಾ ಬದಲಾವಣೆ ಸಮಯ ಏನಾಗುತ್ತದೆ ಏನೋ…..
ರಾಜ್ಯದಲ್ಲಿ ಶಾಲಾ ಸಮಯ ಬದಲಾವಣೆ ವಿಚಾರ ಕುರಿತಂತೆ ಇನ್ನೂ ಗೊಂದಲ ಬಗೆ ಹರಿದಿಲ್ಲ ಈ ಒಂದು ವಿಚಾರ ಕುರಿತಂತೆ ಈಗಾಗಲೇ ಎರಡು ಮೂರು ಬಾರಿ ಮೇಲಿಂದ ಮೇಲೆ ಸಭೆಗಳಾದರೂ ಕೂಡಾ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಮತ್ತು ಪೋಷಕರ ಒಕ್ಕೂಟ ವಿರೋಧ ವ್ಯಕ್ತಪಡಿಸಿವೆ ಈಗಿರುವ ಶಾಲಾ ಸಮಯ ಮುಂದುವರಿಕೆಗೆ ಮನವಿ ಮಾಡಿವೆ ಇನ್ನು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಇವರ ಮನವಿಯನ್ನು ಕೋರ್ಟ್ ಗೆ ಮನವರಿಕೆ ಮಾಡಿಕೊಡಲಾಗುವುದು ಎಂಬ ಒಂದು ಮಹತ್ವದ ತೀರ್ಮಾನವನ್ನು ಕೈಗೊಳ್ಳ ಲಾಗಿಯಿತು.
ನಗರದ ಸಂಚಾರ ದಟ್ಟಣೆ ನಿವಾರಣೆಗೆ ಶಾಲೆಗಳ ಸಮಯ ಬದಲಾವಣೆ ಮಾಡುವ ಕುರಿತು ಹೈಕೋರ್ಟ್ ನೀಡಿರುವ ಸಲಹೆಯನ್ನು ಒಪ್ಪಿ ಕೊಳ್ಳಲು ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಹಾಗೂ ಪೋಷಕರ ಒಕ್ಕೂಟ ನಿರಾಕರಿ ಸಿದ್ದು ಪ್ರಸ್ತುತ ಇರುವ ಸಮಯವನ್ನೇ ಮುಂದು ವರೆಸಬೇಕು ಎನ್ನುವ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿವೆ.
ರಾಜ್ಯ ರಾಜಧಾನಿಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಶಾಲಾ ಸಮಯದಲ್ಲಿ ಬದಲಾವಣೆ ಮಾಡುವ ಕುರಿತ ಹೈಕೋರ್ಟ್ ಸಲಹೆ ಮೇರೆಗೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ, ಪೋಷಕರ ಒಕ್ಕೂಟ,ಪೊಲೀಸ್ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದರು. ಸಭೆಯಲ್ಲಿ ಎಲ್ಲರೂ ತಮ್ಮ ಅಭಿಪ್ರಾಯ ವ್ಯಕ್ತಪ ಡಿಸಿದರು.
ಸಂಚಾರ ದಟ್ಟಣೆ ಕಾರಣಕ್ಕೆ ಶಾಲೆಗಳ ಸಮಯ ಬದಲಾವಣೆ ಪರ್ಯಾಯ ಮಾರ್ಗವಲ್ಲ ಎನ್ನುವ ಸಲಹೆಯನ್ನು ಶಾಲಾ ಪಾಲುದಾರರು ಸರ್ಕಾರಕ್ಕೆ ತಿಳಿಸಿದರು. ಒಟ್ಟಾರೆ ಶಾಲಾ ಸಮಯ ಬದಲಾ ವಣೆ ಮಾಡದಂತೆ ಒಮ್ಮತದ ಅಭಿಪ್ರಾಯ ವ್ಯಕ್ತ ಪಡಿಸಿದ್ದರು.ಇನ್ನೂ ಪೋಷಕರ ಸಂಘಟನೆ ಶಾಲಾ ಸಮಯದ ಬದಲಾವಣೆಗೆ ತೀವ್ರ ವಿರೋ ಧವನ್ನು ವ್ಯಕ್ತಪಡಿಸಿದೆ ಪ್ರಾಥಮಿಕ ಶಾಲೆಯ ಮಕ್ಕಳಿಗೆ 9 ರಿಂದ 10ಗಂಟೆ ನಿದ್ದೆ ಅವಶ್ಯವಾಗಿದೆ.
ಶಾಲಾ ಸಮಯ ಬದಲಾವಣೆಯಿಂದ ಮಕ್ಕಳ ನಿದ್ದೆ ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾ ಮವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿತು. ಬಿಎಂಟಿಸಿ ಬಸ್ ಗಳ ವ್ಯವಸ್ಥೆಗೂ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸಣ್ಣ ಮಕ್ಕಳ ಸಂಚಾರದ ಸಂದರ್ಭದಲ್ಲಿ ಹೆಚ್ಚಿನ ಜಾಗರೂಕತೆ ಇರಬೇಕಾಗುತ್ತದೆ.ಆದರೆ ಬಿಎಂಟಿಸಿ ಚಾಲಕರ ಅಜಾಗರೂಕ ಚಾಲನೆಯ ಬಗ್ಗೆ ಈಗಾಗಲೇ ಹಲವು ದೂರುಗಳಿವೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದರು.
ಶಾಲಾ ಒಕ್ಕೂಟವು ಈ ನಿರ್ಧಾರವನ್ನು ವಿರೋಧಿ ಸಿದೆ.ಟ್ರಾಫಿಕ್ ಪೊಲೀಸರು ಬೆಳಗ್ಗೆ 7ರಿಂದಲೇ ಟ್ರಾಫಿಕ್ ನಿರ್ವಹಣೆ ನಡೆಸಬೇಕು.ನೆರೆಹೊರೆ ಶಾಲೆ, ಪರಿಕಲ್ಪನೆ ಜಾರಿಗೊಳಿಸಬೇಕು. ವಿದ್ಯಾರ್ಥಿ ಗಳು ಪ್ರವೇಶ ಪಡೆಯುವಾಗಲೇ ಸಮೂಹ ಸಾರಿಗೆ ಸಾರ್ವಜನಿಕ ಸಾರಿಗೆ ಅಥವಾ ಶಾಲಾ ಬಸ್ ಅನ್ನು ಮಾತ್ರ ಬಳಸುತ್ತೇವೆ ಎಂಬ ಮುಚ್ಚಳಿಕೆಯನ್ನು ಶಿಕ್ಷಣ ಸಂಸ್ಥೆಗೆ ನೀಡಬೇಕು ಎಂಬ ಸಲಹೆಯನ್ನು ನೀಡಿದು ಪೈನಲ್ ಆಗಿ ಏನೇನಾಗಲಿದೆ ಎಂಬೊದನ್ನು ಕಾದು ನೋಡ ಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..