ಧಾರವಾಡದಲ್ಲಿ ಮುಂದುವರಿದ ಸ್ವಚ್ಚ ಸಂಡೇ ಕಾರ್ಯಕ್ರಮ – ಯುವ ಮೋರ್ಚಾ ಟೀಮ್ ಗೆ ಸಾಥ್ ನೀಡಿದ ಅಮೃತ ದೇಸಾಯಿ ಬಳಗದ ಸದಸ್ಯರು…..

Suddi Sante Desk

ಬೆಂಗಳೂರು –

ಸ್ವಚ್ಚತಾ ಸಂಡೇ ಕಾರ್ಯಕ್ರಮ ಧಾರವಾಡದಲ್ಲಿ ಮುಂದುವರೆದಿದೆ. ಬಿಜೆಪಿ ಯುವ ಮೋರ್ಚಾ ಧಾರವಾಡ ನಗರ ಘಟಕ-71ರ ವತಿಯಿಂದ ಮತ್ತು ಅಮೃತ ದೇಸಾಯಿ ಗೆಳೆಯರ ಬಳಗದ ಸಹಯೋಗ ದಲ್ಲಿ ಇಂದು ಧಾರವಾಡದ ವಾರ್ಡ ನಂಬರ್ 8 ರ ವಿದ್ಯಾರಣ್ಯ ಶಾಲೆಯ ಆವರಣ ಹಾಗೂ ಮೈದಾನ ವನ್ನು ಸ್ವಚ್ಚಗೂಳಿಸಿ ಸ್ವಚ್ಛ ಸಂಡೇ ಅಭಿಯಾನವನ್ನು ಯಶಸ್ವಿಯಾಗಿ ಮಾಡಲಾಯಿತು.

ಬಿಜೆಪಿ ಯುವಮೋರ್ಚಾ ಮಂಡಳ ಅಧ್ಯಕ್ಷರಾದ ಶಕ್ತಿ ಹಿರೇಮಠ ಅವರ ನೇತೃತ್ವದಲ್ಲಿ ನಡೆದ ಈ ಒಂದು ಕಾರ್ಯದಲ್ಲಿ ಜಿಲ್ಲಾ ಅಧ್ಯಕ್ಷರಾದ ಕಿರಣ ಉಪ್ಪಾರ್, ಮಂಡಳ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ಕೋಟ್ಯಾನ್, ಹರೀಶ್ ಬಿಜಾಪುರ, ಜಿಲ್ಲಾ ಕಾರ್ಯದರ್ಶಿಗಳಾದ ಸಿದ್ದು ಕಲ್ಯಾಣ ಶೆಟ್ಟಿ, ಮಂಡಳ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ವಿನಾಯಕ ಗೊಂಧಳಿ, ಮುತ್ತು ಬನ್ನೂರು

ಇನ್ನೂ ಇದೇ ವೇಳೆ ಸ್ವಚ್ಚ ಭಾರತ ಸಂಚಾಲಕರಾದ ವಿನೋದ್, ಸಹ ಸಂಚಾಲಕ ಪ್ರಕಾಶ್ ಇಂಗಳೆ, ಪಕ್ಷದ ಪ್ರಮುಖರಾದ ನಿಂಗಪ್ಪ ಸಪೂರಿ, ಚೇತನ್ ರಾಯಚೂರ, ಮಹೇಶ ತಪೆಲಾ, ಗುರು ತಳವಾರ, ಶಂಕರ ಪಟ್ಟಣಶೆಟ್ಟಿ, ಉದಯ್ ಯಂಡಿಗೇರಿ, ಚಂದ್ರಮೌಳೇಶ್ವರ ಗುಮಗೊಳ್, ಯುವಮೋರ್ಚಾ ಪದಾಧಿಕಾರಿಗಳಾದ ಕಾರ್ತಿಕ ಪೂಜಾರ, ರಾಘವೇಂದ್ರ ತುಪ್ಪದ,

ಸುರಂಜನ ಗುಂಡೆ, ರಾಜೇಶ ನಾಯ್ಕ, ಸಚಿನ ಚವಾಣ್, ಸಾಗರ್ ಜೋಶಿ, ರವಿ ಮಾಳಗಾರ್, ರೋಹಿತ್ ಜಾಧವ, ಮಾಂತೇಶ ಹೆಬಸುರ್, ಚಿದಾನಂದ್ ಒಂಟಿ, ಪೃಥ್ವಿ, ಕಾರ್ತಿಕ ಹೆಂಬಲೀ, ವಿನಾಯಕ ಭೊಳೆ, ತನುಷ ಹೇಬ್ಬಳ್ಳಿ ಚಿದಾನಂದ ವಂಟಿ,ಮಹಾಂತೇಶ ಹೆಬಸೂರ ಹಾಗೂ ಎಲ್ಲ ಯುವ ಮೋರ್ಚಾ ಪದಾಧಿಕಾರಿಗಳು, ಕಾರ್ಯ ಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.