ಹತ್ತಿ ಜಮೀನಿಗೆ ಬೆಂಕಿ – ಸುಟ್ಟ ಕರಕಲಾದ ಹತ್ತಿ – ಕೊಳ್ಳಿ ಇಟ್ಟಿದ್ದು ಯಾರು ಕಂಗಾಲಾದ ರೈತ…..

Suddi Sante Desk

ಧಾರವಾಡ –

ಸಮೃದ್ದವಾಗಿ ಬೆಳೆದ ಹತ್ತಿ ಜಮೀನೊದು ಬೆಂಕಿಗೆ ಆಹುತಿಯಾದ ಘಟನೆ ಧಾರವಾಡದ ಹಾರೊಬೆಳ ವಡಿ ಗ್ರಾಮದಲ್ಲಿ ನಡೆದಿದೆ‌‌.ಗ್ರಾಮದ ಶಿವಪ್ಪ ಯಲ್ಲಪ್ಪ ರೋಣದ ಎಂಬುವರ ರೈತನ ಜಮೀನಿ ನಲ್ಲಿ ಬೆಂಕಿ ಕಾಣಿಸಿಕೊಂಡು ಒಂದು ಎಕರೆ ಹತ್ತಿ ಜಮೀನು ಸಂಪೂರ್ಣವಾಗಿ ಸುಟ್ಟ ಕರಕಲಾಗಿದೆ.

ಸಾಕಷ್ಟು ಪ್ರಮಾಣದಲ್ಲಿ ಸಮೃದ್ಧವಾಗಿ ಹತ್ತಿ ಬೆಳೆದಿತ್ತು ಇನ್ನೇನು ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಯಾರೋ ಇವತ್ತು ಜಮೀನಿಗೆ ಬೆಂಕಿ ಇಟ್ಟಿದ್ದಾರೆ ಇದರಿಂದಾಗಿ ಸಂಪೂರ್ಣವಾಗಿ ಹತ್ತಿ ಬೆಳೆ ಬೆಂಕಿಗೆ ಆಹುತಿಯಾಗಿದೆ‌.

ಯಾರೋ ಬೇಕು ಅಂತೆ ಜಮೀನಿಗೆ ಬೆಂಕಿ ಇಟ್ಟಿದ್ದಾರೆ ಎಂದು ರೈತ ಶಿವಪ್ಪ ಅವರು ಹೇಳಿದ್ದಾರೆ. ಇನ್ನೂ ಒಂದು ಎಕರೆ ಭೂಮಿಯಲ್ಲಿ ಬೆಳೆದಿದ್ದ ಹತ್ತಿ ಸಂಪೂರ್ಣವಾಗಿ ಸುಟ್ಟ ಕರಕಲಾಗಿದೆ‌.ಇತ್ತ ಸುದ್ದಿ ತಿಳಿದ ಧಾರವಾಡ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಇನ್ನೂ ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದವರು ಬೆಂಕಿಯನ್ನು ನಂದಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.