ಧಾರವಾಡ –
ಕಳೆದ ಚುನಾವಣೆಯಲ್ಲಿ ನಿಮ್ಮ ಸಹಾಯ ಪಡೆದು ನಿಮ್ಮನ್ನು ನಿರ್ಲಕ್ಷಿಸಿ ಮತ್ತೆ ಫೂಲ್ ಮಾಡಲು ಬರುತ್ತಿದ್ದಾರೆ ಎಚ್ಚರ ಎಂಬ ಪೊಸ್ಟ್ ವೈರಲ್ಚುನಾವಣೆ ಘೋಷಣೆ ಬೆನ್ನಲ್ಲೇ ಧಾರವಾಡ ಗ್ರಾಮೀಣದಲ್ಲಿ ಸಿಡಿದೆದ್ದ BJP ನಿಷ್ಠಾವಂತ ನಾಯಕ.
ವಿಧಾನ ಸಭೆಗೆ ಚುನಾವಣೆ ಘೋಷಣೆ ಬೆನ್ನಲ್ಲೇ ಧಾರವಾಡ ಗ್ರಾಮೀಣ ಪ್ರದೇಶದ ಬಿಜೆಪಿ ಯಲ್ಲಿ ಭಿನ್ನಮತ ಸ್ಪೋಟಗೊಂಡಿದೆ.ಹೌದು ಪಕ್ಷದ ನಾಯಕರ ವಿರುದ್ದ ಪಕ್ಷದ ನಿಷ್ಠಾವಂತ ಮುಖಂಡ ಸುನೀಲ ಗುಡಿ ಸಿಡಿದೆದ್ದಿದ್ದಾರೆ.ಹೌದು ಅದ್ಯಾಕೋ ಎನೋ ಸಧ್ಯ ಚುನಾವಣೆ ಘೋಷಣೆಯಾಗುತ್ತಿ ದ್ದಂತೆ ಇತ್ತ ಕ್ಷೇತ್ರದಲ್ಲಿ ನಾಯಕರ ವಿರುದ್ದ ಸುನೀಲ ಗುಡಿ ಸಾಮಾಜಿಕ ಜಾಲ ತಾಣಗಳಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಬಹಿರಂಗವಾಗಿ ತಮ್ಮ ಆಕ್ರೋಶ ಅಸಮಾಧಾನ ವನ್ನು ವ್ಯಕ್ತಪಡಿಸಿರುವ ಇವರು ಇದರೊಂದಿಗೆ ಕ್ಷೇತ್ರದಲ್ಲಿ ಶಿಸ್ತಿನ ಪಕ್ಷದಲ್ಲಿ ಅಶಿಸ್ತಿನ ವಾತಾವರಣ ಕಂಡು ಬರುತ್ತಿದ್ದು ಇದರೊಂದಿಗೆ ಭುಗಿಲೆದ್ದಿದೆ ಭಿನ್ನಮತವು.ಕಳೆದ ಚುನಾವಣೆಯಲ್ಲಿ ನಿಮ್ಮ ಸಹಾಯ ಪಡೆದು ನಿಮ್ಮನ್ನು ನಿರ್ಲಕ್ಷಿಸಿ ಮತ್ತೆ ಏಪ್ರೀಲ್ ಫೂಲ್ ಮಾಡಲು ಬರುತ್ತಿದ್ದಾರೆ ಎಂದು ಬರೆದಿರುವ ಪೊಸ್ಟ್ ವೈರಲ್ ಆಗಿದ್ದು ಇದರೊಂ ದಿಗೆ ಚುವಾವಣೆಯ ಹೊಸ್ತಿಲಲ್ಲಿ ಧಾರವಾಡ ಗ್ರಾಮೀಣ ಬಿಜೆಪಿ ಯಲ್ಲಿ ಎಲ್ಲವೂ ಸರಿಯಿಲ್ಲ ಎಂಬೊಂದು ಬಹಿರಂಗವಾಗಿದೆ.
ಕಳೆದ ಚುನಾವಣೆಯಲ್ಲಿ ನಿಮ್ಮ ಸಹಾಯ ಪಡೆದು ನಿಮ್ಮನ್ನು ನಿರ್ಲಕ್ಷಿಸಿ ಮತ್ತೆ ಏಪ್ರಿಲ್ ಫೂಲ ಮಾಡಲು ಬರುತ್ತಿದ್ದಾರೆ ಎಚ್ಚರ ಎಂದು ಹೇಳಿದ್ದು ಯಾರಿಗೆ ಎಂಬ ಮಾತುಗಳು ಸಧ್ಯ ಕ್ಷೇತ್ರದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು ಕೊನೆಗೆ ನಿಷ್ಠಾವಂತ ಕಾರ್ಯಕರ್ತರಿಗೆ ಮಾತ್ರ ಎಂದು ಉಲ್ಲೇಖ ಮಾಡಿದ್ದಾರೆ.ಒಟ್ಟಾರೆ ಚುನಾವಣೆಯ ಹೊಸ್ತಿಲಲ್ಲಿ ಸಧ್ಯ ಶಿಸ್ತಿನ ಪಕ್ಷದಲ್ಲಿ ಎಲ್ಲವೂ ಸರಿ ಯಿಲ್ಲ ಎಂಬೊದು ಇದರಿಂದ ಬಹಿರಂಗಗೊಂಡಿ ದ್ದು ಇದು ಪಕ್ಷದ ಮೇಲೆ ಯಾವ ಪರಿಣಾಮ ಬೀರಲಿದೆ ಹಾಗೇ ಮುಂದೇನಾಗುತ್ತದೆ ಎಂಬೊ ದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..