ಧಾರವಾಡ –
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ,ತಾಲೂಕ ಘಟಕ ಚಿಂಚೋಳಿ ಇದರ ಉಪಾಧ್ಯಕ್ಷರು ಹಾಗೂ ಸಂಘಟನಾ ಚತುರರು,ಕ್ರೀಯಾಶೀಲ ಶಿಕ್ಷಕರು ಆಗಿರುವ ಮಾನ್ಯ ಮುರಳೀಧರ L. A. ಇವರನ್ನು ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತು (ರಿ) ಜಿಲ್ಲಾ ಘಟಕ ಕಲಬುರಗಿ ಇದರ ಜಿಲ್ಲಾಧ್ಯಕ್ಷರೆಂದು 2022 ರಿಂದ 2026 ರ ಅವಧಿಗಾಗಿ ನೇಮಕ ಮಾಡಲಾಗಿದೆ. ಅದೇ ರೀತಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕ್ರೀಯಾಶೀಲ ಶಿಕ್ಷಕರು,ಸಂಘಟನಾ ಚತುರರು ಆಗಿರುವ ಮಾನ್ಯ ದೋಂಢಿರಾಮ ರವರನ್ನು ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತು ಜಿಲ್ಲಾ ಘಟಕ ಕಲಬುರಗಿ ಇದರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ 2022 ರಿಂದ 2026 ರ ಅವಧಿಗಾಗಿ ನೇಮಕ ಮಾಡಲಾಗಿದೆ ಎಂದು ಈ ಮೂಲಕ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಅಭಿನಂದನೆಗಳೊಂದಿಗೆ
ಗುರು ತಿಗಡಿ ರಾಜ್ಯಾಧ್ಯಕ್ಷರು
ಪ್ರಧಾನ ಕಾರ್ಯದರ್ಶಿ ಮತ್ತು ಸರ್ವ ಸದಸ್ಯರು ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತು(ರಿ) ರಾಜ್ಯ ಘಟಕ ಧಾರವಾಡ