ಕಾರವಾರ –
ಮುಳ್ಳುಹಂದಿ ಯನ್ನು ಬೇಟೆಯಾಡಿ ಸಾಗಿಸುತ್ತಿದ್ದ ಇಬ್ಬರನ್ನು ಬಂಧನ ಮಾಡಿರುವ ಘಟನೆ ಕಾರವಾರ ದಲ್ಲಿ ನಡೆದಿದೆ.ಬೈಕ್ನಲ್ಲಿ ಸಾಗಿಸುತ್ತಿದ್ದ ವೇಳೆ ಅರಣ್ಯಾಧಿಕಾರಿಗಳು ದಾಳಿಯನ್ನು ಮಾಡಿ ದ್ದಾರೆ.
ಕುಮಟಾದ ಅನೆಗುಂದಿ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ.ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕು ಪ್ರದೇಶದಲ್ಲಿ ಈ ಒಂದು ಕಾರ್ಯದಲ್ಲಿ ತೋಡಗಿದ್ದರು.ದೀವಳ್ಳಿ ಗ್ರಾಮದ ಸಂಜಯ ದಿನ್ನಿ ನೊರೊನಾ, ಫ್ರಾನ್ಸಿಸ್ ರೊಡ್ರಗೀಸ್ ಬಂಧಿತ ಆರೋಪಿಗಳಾಗಿದ್ದಾರೆ.
ಪ್ರಮುಖ ಆರೋಪಿ ಹೆಬ್ಬೈಲ್ ಗ್ರಾಮದ ಸಂದೀಪ ನಾಯ್ಕ ನಾಪತ್ತೆಯಾಗಿದ್ದಾರೆ. ಹೊನ್ನಾವರ ವಿಭಾಗದ ಡಿಸಿಎಫ್ ರವಿಶಂಕರ.ಸಿ, ಕುಮಟಾ ಎಸಿಎಫ್ ಲೋಹಿತ್.ಜಿ ಮಾರ್ಗದರ್ಶ ನದಲ್ಲಿ ಕತಗಾಲ ಆರ್ಎಫ್ಓ ರಾಜು ನಾಯ್ಕ ಕಾರ್ಯಾಚರಣೆ ಮಾಡಿದ್ದಾರೆ.ವನ್ಯಜೀವಿ ಕಾಯ್ದೆಯಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.