ಧಾರವಾಡ –
ಡ್ರಗ್ಸ್ ಕುರಿತು ಸಾರ್ವಜನಿಕರಲ್ಲಿ ತಿಳುವಳಿಕೆ ಜಾಗೃತಿ ಮೂಡಿಸಿ ತಿಳುವಳಿಕೆ ಮೂಡಿಸುವ ಉದ್ದೇಶದಿಂದಾಗಿ ಕಳೆದ ತಿಂಗಳು 28 ಕ್ಕೆ ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣವರ ಮತ್ತು ಸದಾ ಅಮರಾಪೂರ ಸೈಕಲ್ ಯಾತ್ರೆ ಯಶಸ್ವಿ ಯಾಗಿ ನಡೆದಿದೆ.ಈಗಾಗಲೇ ಆರೋಗ್ಯ ದಲ್ಲಿ ಹೆಚ್ಚು ಕಡಿಮೆಯಾಗಿ ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣವರ ಯಾತ್ರೆ ಕೈಬಿಟ್ಟಿದ್ದು ಇತ್ತ ಸದಾ ಅಮರಾಪೂರ ಒಬ್ಬರೇ ಮುಂದು ವರೆಸಿದ್ದು ಈಗಾಗಲೇ 2557 ಕಿಲೋ ಮೀಟರ್ ಸೈಕಲ್ ಯಾತ್ರೆ ಧಾರವಾಡ ಗೆ ಆಗಮಿಸಿತು.
ಹೌದು ಈಗಾಗಲೇ ಸಾವಿರಾರು ಕಿಲೋಮೀಟರ್ ಸೈಕಲ್ ನಲ್ಲಿ ಪ್ರಯಾಣಿಸಿ ಇದರೊಂದಿಗೆ ದಾರಿ ಉದ್ದಕ್ಕೂ ಡ್ರಗ್ಸ್ ಕುರಿತು ಜಾಗೃತಿ ಮೂಡಿಸುತ್ತಾ ಸೈಕಲ್ ಸವಾರಿ ಧಾರವಾಡ ಗೆ ಬರುತ್ತಿದ್ದಂತೆ ಸ್ವಾಗತಿಸಲಾಯಿತು
ನಗರಕ್ಕೆ ಆಗಮಿಸಿದ ಈ ಒಂದು ಸೈಕಲ್ ರ್ಯಾಲಿ ಯನ್ನು ಕೆಸಿಡಿ ಗಣೇಶ ದೇವಾಲಯ ಮುಂದೆ ಸ್ವಾಗತ ಮಾಡಲಾಯಿತು.ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣವರ, ಸಂಚಾರಿ ಪೊಲೀಸ್ ಠಾಣೆ ಯ ಸಿಬ್ಬಂದಿ ಗಳಾದ ಬಸಯ್ಯ ಮತ್ತು ಹಣಮಂತ ರೊಳ್ಳಿ,ವೈದ್ಯರಾದ ಡಾ ಕಿರಣ ಕುಲಕರ್ಣಿ, ಡಾ ಸತೀಶ್ ಇಳಕಲ್,ಸೇರಿದಂತೆ ಹಲವರು ಬರಮಾಡಿಕೊಂಡ ಸ್ವಾಗತಿಸಿದರು
ನಾಳೆ ಬೆಳಿಗ್ಗೆ ಧಾರವಾಡ ದಿಂದ ಮತ್ತೆ ಸೈಕಲ್ ಸವಾರಿ ಆರಂಭವಾಗಲಿದೆ.