This is the title of the web page
This is the title of the web page

Live Stream

[ytplayer id=’1198′]

October 2025
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ನನ್ನ ಮೇಲೆ ಸುಫಾರಿ ಕೊಡುವ ಬದಲು ವಿಷ ಕೊಟ್ಟಿದ್ರೇ ಸಾಕಿತ್ತು – ಬಸವರಾಜ ಮುತ್ತಗಿ

WhatsApp Group Join Now
Telegram Group Join Now

ಧಾರವಾಡ – ನನಗೆ ಸುಪಾರಿ ಕೊಡುವ ಬದಲಿಗೆ ಒಂದಿಷ್ಟು ವಿಷ ಕೊಟ್ಟಿದ್ದರೆ ಸಾಕಿತ್ತು.ಹೀಗೆಂದು ಯೊಗೀಶಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸ್ಥಾನದಲ್ಲಿರುವ ಬಸವರಾಜ ಮುತ್ತಗಿ ಹೇಳಿದರು. ಧಾರವಾಡದಲ್ಲಿ ಸಿಬಿಐ ಅಧಿಕಾರಿಗಳ ತನಿಖೆ ಎದುರಿಸಿ ಬಂದ ನಂತರ ಮಾತನಾಡಿದರು. ಯೊಗೇಶಗೌಡ ಕೊಲೆ ಪ್ರಕರಣವನ್ನು, ಸಿಬಿಐ ಅಧಿಕಾರಿಗಳು ದಿನೇ ದಿನೇ ವಿಚಾರಣೆ ತೀವ್ರಗೊಳ್ಳಿಸಿದ್ದು, ಹಲವು ಸ್ಪೋಟಕ ಮಾಹಿತಿಗಳನ್ನು ಹೊರಗೆ ಎಳಿಯುತ್ತಿದ್ದಾರೆ. ಅದರಲ್ಲಿ ಈಗ ಯೊಗೇಶಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಮುತ್ತಿಗೆಯನ್ನೇ ಹೊಡೆಯಲು ಸ್ಕೆಚ್ ಹಾಕಲಾಗಿದೆ ಎಂಬ ಸ್ಪೋಟಕ ಮಾಹಿತಿಯು ಈಗ ಕೇಳಿ ಬರುತ್ತಿದೆ.

ಇಂದು ಕೂಡಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಮುತ್ತಿಗೆಯನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ಕರೆದಿದ್ದರು, ಇನ್ನೂ ಧಾರವಾಡ ಉಪನಗರ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿ ತನಿಖೆ ಮುಗಿಸಿ ಹೋರ ಬರುತ್ತಿರುವ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಈಗಾಗಲೇ ಸಿಬಿಐ ತನಿಖೆ ನಡೆಯುತ್ತಿದೆ, ಹಾಗಾಗಿ ಯಾವುದನ್ನು ಹೇಳೊದಕ್ಕೆ ಬರೊದಿಲ್ಲ ಎಂದರು.

ಚಂದ್ರಶೇಖರ ಇಂಡಿಯವರನ್ನು ಕರೆದುಕೊಂಡು ಬಂದಿರುವುದು ಅಕ್ರಮ ಶಸ್ತ್ರಾಸ್ತ್ರಗಳ ಸಾಗಾಟ ಮಾಡಿದಕ್ಕೆ ಸಿಬಿಐ ಅಧಿಕಾರಿಗಳು ಕರೆದುಕೊಂಡು ಬಂದಿರುತ್ತಾರೆ, ಆದರೆ ನಾನು ಯಾವುದನ್ನು ಹೇಳೋಕ್ಕೆ ಬರುವುದಿಲ್ಲ, ಇನ್ನೂ ನನ್ನ ಮುಗಿಸಲು ಸುಫಾರಿ ನೀಡಿದರು ಎಂಬ ವಿಚಾರ ನನಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ, ಅದರ ಬದಲು ನನಗೆ ಸ್ವಲ್ಪ ವಿಷ ಕೊಟ್ಟಿದ್ದರೆ ಸಾಕಾಗಿತ್ತು ಎಂದು ಮುತ್ತಿಗೆ ಹೇಳಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk