ಧಾರವಾಡ –
ಕೆಲವೊಂದಿಷ್ಟು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿರುವ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ಅತಿಥಿ ಉಪನ್ಯಾಸಕರ ಹೋರಾಟ ಪ್ರತಿಭ ಟನೆ ಮುಂದುವರೆದಿದೆ.ವಿವಿ ಆವರಣದಲ್ಲಿ ಹಗಲು ರಾತ್ರಿ ಎನ್ನದೇ ಅತಿಥಿ ಉಪನ್ಯಾಸಕರು ಹೋರಾಟವನ್ನು ಮಾಡು ತ್ತಿದ್ದು 17ನೇ ದಿನಕ್ಕೆ ಕಾಲಿಟ್ಟಿದೆ.ಇನ್ನೂ ಅತಿಥಿ ಉಪನ್ಯಾ ಸಕರು ವಿಭಿನ್ನವಾಗಿ ಹೋರಾಟವನ್ನು ಮಾಡಿದರು.
ಹೌದು ವಿಶ್ವವಿದ್ಯಾಲಯ ಸೇರಿದಂತೆ ಸುತ್ತ ಮುತ್ತಲೂ ಕ್ಯಾಂಪಸ್ ನಲ್ಲಿ ಬೀಕ್ಷಾಟನೆ ಮಾಡುವ ಮೂಲಕ ವಿಭಿನ್ನವಾಗಿ ಹೋರಾಟವನ್ನು ಮಾಡಿದರು.ಹೌದು ಕರ್ನಾಟಕ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರ ಮುಷ್ಕರ ಇಂದಿಗೆ 17 ದಿನಕ್ಕೆ ಕಾಲಿಟ್ಟಿದ್ದು ಮುಖ್ಯ ರಸ್ತೆಗಳ ಲ್ಲಿ ಹಣಕಾಸಿನ ಸಂಕಷ್ಟಕ್ಕೆ ಸಿಲುಕಿರುವ ಕವಿವಿ ಮತ್ತು ಕುಲಪತಿಗಳಿಗೆ ದೇಣಿಗೆ ಎತ್ತುವ ಕಾರ್ಯಕ್ರಮ ಉಪನ್ಯಾ ಸಕರು ವಿಶೇಷವಾಗಿ ಪ್ರತಿಭಟನೆ ಮಾಡಿದರು.ಕಳೆದ 17 ದಿನಗಳಿಂದ ಹೋರಾಟ ನಡೆಯುತ್ತಿದ್ದರು ಕೂಡಾ ಅತಿಥಿ ಉಪನ್ಯಾಸಕರ ನೋವನ್ನು ಸರ್ಕಾರಕ್ಕೆ ಮನವರಿಕೆ ಮಾಡಿ ಕೊಡಲು ಕುಲಪತಿಗಳು ವಿಫಲರಾಗಿದ್ದಾರೆ. ಸರ್ಕಾರದಿಂದ ಕವಿವಿ ಗೆ ಬರಬೇಕಾದ 186 ಕೋಟಿ ರೂಪಾಯಿಗಳನ್ನು ತರುವಲ್ಲಿ ಕವಿವಿ ಆಡಳಿತ ಮಂಡಳಿ ಸಂಪೂರ್ಣ ವಿಫಲ ವಾಗಿದೆ. ಅವರ ಬಹುಮುಖ್ಯ ಬೇಡಿಕೆಯಾದ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಕವಿವಿ ಆಡಳಿತ ಮಂಡಳಿ ಅರ್ಥ ಮಾಡಿಕೊಳ್ಳಲು ಮತ್ತು ಇತ್ಯರ್ಥ ಮಾಡಲು ನಿರಾ ಸಕ್ತಿ ತೋರಿದೆ.ಇನ್ನೂ ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಕಾಂಗ್ರೇಸ್ ಪಕ್ಷದ ಯುವ ಮುಖಂಡ ನಾಗರಾಜ ಗೌರಿ ಮತ್ತು ರವಿ ಮಾಳಿಗೇರ ಸೇರಿದಂತೆ ಹಲವರು ಬೆಂಬಲ ನೀಡಿದರು.