ಧಾರವಾಡ –
ಉದ್ಘಾಟನೆಯಾಗುವ ಮುನ್ನವೇ ಕಿತ್ತುಕೊಂಡು ಬಂದ ವಿದ್ಯುತ್ ಕಂಬಗಳು – ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿಗೆ ಸಾಕ್ಷಿಯಾಯಿತು ಧಾರವಾಡ ದಲ್ಲಿನ ಕಾಮಗಾರಿ ಇತ್ತ ನೋಡಿ ಶಾಸಕ ಅರವಿಂದ ಬೆಲ್ಲದ, ಮಹಾನಗರ ಪಾಲಿಕೆಯ ಆಯುಕ್ತರೇ…..ಹೌದು
ಉದ್ಘಾಟನೆಯಾಗುವ ಮುನ್ನವೇ ಧಾರವಾಡ ದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮಾಡ ಲಾಗಿರುವ ಕಾಮಗಾರಿಗಳು ಕಿತ್ತುಕೊಂಡು ಬರುತ್ತಿವೆ.ಹೌದು ಧಾರವಾಡ ನಗರದ ಸ್ಟೇಷನ್ ರಸ್ತೆಯಲ್ಲಿರುವ ಹುಬ್ಬಳ್ಳಿ ಧಾರವಾಡ ಮಹಾ ನಗರ ಪಾಲಿಕೆಯ ಕನಸಿನ ಕೂಸಾದ ರಸ್ತೆ ಅಕ್ಕ ಪಕ್ಕದಲ್ಲಿನ ವಿದ್ಯುತ್ ಕಂಬಗಳಲ್ಲಿನ ಕೆಲವೊಂ ದಿಷ್ಟು ಪರಿಕರಗಳು ಈಗಲೇ ಕಿತುತ್ಕೊಂಡು ಬರುತ್ತಿವೆ.
ಧಾರವಾಡದಲ್ಲಿ ಸ್ಮಾರ್ಟ್ ಸಿಟಿಯಲ್ಲಿನ ಕಾಮ ಗಾರಿ ಕಳಪೆ ಗುಣಮಟ್ಟದ್ದಾಗಿದೆ ಕಾಮಗಾರಿ ಕಳಪೆ ಗುಣಮಟ್ಟದ್ದಾಗಿದ್ದು ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ಪರಿಕರಗಳು ಕಂಬದಲ್ಲಿಯೇ ಕಿತ್ತುಕೊಂಡು ಜೋತಾಡುತ್ತಿವೆ.ಅಲ್ಲದೇ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವವರಿಗೆ ತಲೆಯ ಮೇಲೆ ಬೀಳುವ ಹಂತಕ್ಕೆ ಬಂದಿದ್ದು ಸಾಮಾಜಿಕ ಜಾಲ ತಾಣಗಳಲ್ಲಿ ಪೊಟೊಗಳು ಸಾಕಷ್ಟು ಪ್ರಮಾಣದಲ್ಲಿ ವೈರಲ್ ಆಗುತ್ತಿವೆ.
ಅಲ್ಲದೇ ಈ ಕೂಡಲೇ ಮಹಾನಗರ ಪಾಲಿಕೆಯ ಆಯುಕ್ತರು ಈ ಕುರಿತಂತೆ ಸ್ಪಂದಿಸಿ ಸೂಕ್ತವಾದ ಕ್ರಮವನ್ನು ಕೈಗೊಳ್ಳುವಂತೆ ಒತ್ತಾಯವನ್ನು ಸಾರ್ವಜನಿಕರು ಮಾಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..