ಚನ್ನಪಟ್ಟಣ –
ಬಿಜೆಪಿ ಮುಖಂಡರೊಬ್ಬರ ಮೇಲೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಚನ್ನಪ ಟ್ಟಣ ದಲ್ಲಿ ನಡೆದಿದೆ.ಹೌದು ಲೋಕೋಪಯೋಗಿ ಇಲಾಖೆಯ ಕಚೇರಿ ಮುಂಭಾಗದಲ್ಲಿ ಈ ಒಂದು ನಡೆದಿದೆ.
ಸಿದ್ದೇಗೌಡ ಎನ್ನುವವರ ಮೇಲೆ ಜೆಡಿಎಸ್ ಮುಖಂಡ ಪ್ರಥಮ ದರ್ಜೆ ಗುತ್ತಿಗೆದಾರ ಗೋವಿಂದಹಳ್ಳಿ ನಾಗರಾಜ್ ಮತ್ತು ಸಂಗಡಿಗರು ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಾಗಿದ್ದು
ಮುಖಕ್ಕೆ 3 ಹೊಲಿಗೆ ಹಾಕುವಷ್ಟರ ಮಟ್ಟಿಗೆ ಹಲ್ಲೆ ನಡೆಸಲಾಗಿದ್ದು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಲ್ಲೆಗೊಳಗಾದ ಸಿದ್ದೇಗೌಡ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಲಾಗಿದ್ದು ಗಾಯಾಳು ಸಿದ್ದೇಗೌಡ ಈ ಕುರಿತಂತೆ ಪೊಲೀಸರಿಗೆ ಹೇಳಿಕೆಯನ್ನು ನೀಡಿದ್ದಾರೆ
ನಾನು 2006 ರಿಂದ ಆರ್ ಟಿಐ ಕಾರ್ಯಕರ್ತ ನಾಗಿದ್ದೇನೆ ಕೆಲವು ಮಾಹಿತಿ ಬೇಕೆಂದು ಪಿಡಬ್ಲ್ಯೂ ಡಿ ಕಚೇರಿಗೆ ಹೋಗಿದ್ದೆ ಎಂಜಿನಿಯರ್ ರಮ್ಯಾರ ವರ ಭೇಟಿ ಮಾಡಿದ್ದೆ ಈ ಸಂದರ್ಭದಲ್ಲಿ ಗೋವಿಂ ದಹಳ್ಳಿ ನಾಗರಾಜು ಸಹ ಬಂದರು ನಾನು ಅವರು ಬರುತ್ತಿದ್ದಂತೆ ಹೊರಗೆ ಹೋಗಲು ಬಂದೆ ಆಗ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೈದು ಕೊರಳ ಪಟ್ಟಿ ಹಿಡಿದರು.
ಅವರ ಸಂಬಂಧಿಕರು ಕಾರು ಚಾಲಕ ಸೇರಿ ಎಲ್ಲರೂ ಹಲ್ಲೆ ಮಾಡಿದರು ರಾಡ್ ನಿಂದ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.