ಬೆಂಗಳೂರು –
ರಾಜ್ಯ ಸರ್ಕಾರ ರಾಜ್ಯದ ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ.ಹೌದು ಹಬ್ಬದ ಮುಂಗಡ ಮೊತ್ತ ವನ್ನು ಹೆಚ್ಚಳ ಮಾಡುವಂತೆ ರಾಜ್ಯ ಸರ್ಕಾರಕ್ಕೆ ರಾಜ್ಯದ ಸರ್ಕಾರಿ ನೌಕರರ ಧ್ವನಿಯಾಗಿ ಷಡಾಕ್ಷರಿ ಅವರು ಸರ್ಕಾರ ಕ್ಕೆ ಪತ್ರವನ್ನು ಬರೆದಿದ್ದರು.ಈ ನೌಕರರ ಸಂಘವು ಪತ್ರದ ಮೂಲಕ ಕೋರಿಕೊಂಡ ಮನವಿಗೆ ಸ್ಪಂದಿಸಿದ್ದು ಸರ್ಕಾರ ನೌಕರರ ಮನವಿ ಪುರಸ್ಕರಿಸಿದ ನಂತರ 10 ಸಾವಿರದಿಂದ 25 ಸಾವಿರಕ್ಕೆ ಹಬ್ಬದ ಮುಂಗಡ ಮೊತ್ತದ ಹಣ ಹೆಚ್ಚಳ ವಾಗಲಿದೆ.
ಹೌದು ಈ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಪಿಎಸ್ ಷಡಾಕ್ಷರಿ ಅವರು ಆರ್ಥಿಕ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗಳಿಗೆ ಪತ್ರ ಬರೆದಿದ್ದರು. 28-10-2021 ರಂದು ನಡೆದ ಸಭೆಯಲ್ಲಿ ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರಿ ನೌಕರರ ಹಬ್ಬದ ಮುಂಗಡ ಹಣ ಹೆಚ್ಚಳ ಮಾಡುವಂತೆ ನಿರ್ಣಯ ಕೈಗೊಳ್ಳಲಾಗಿದೆ.
ಈ ನಿರ್ಣಯದಂತೆ ಪ್ರಸ್ತುತ ಪರಿಸ್ಥಿತಿಗೆ ಅನುಗುಣವಾಗಿ, ರಾಜ್ಯ ಸರ್ಕಾರಿ ನೌಕರರ ಹಬ್ಬದ ಮುಂಗಡ ಮೊತ್ತವನ್ನು 10 ಸಾವಿರದಿಂದ 25 ಸಾವಿರಗಳಿಗೆ ಹೆಚ್ಚಳ ಮಾಡಿ ಆದೇಶಿಸುವಂತೆ ಕೋರಿಕೊಂಡಿದ್ದು ಸರ್ಕಾರಿ ನೌಕರರ ಸಂಘದ ಕೋರಿಕೆ ಪರಿಗಣಿಸಿ ಆದೇಶದ ನಂತರ ಇನ್ಮುಂದೆ ರಾಜ್ಯ ಸರ್ಕಾರಿ ನೌಕರರಿಗೆ 25 ಸಾವಿರ ರೂಪಾಯಿ ಹಬ್ಬದ ಮುಂಗಡ ಹಣ ಸಿಗಲಿದೆ