ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹುಬ್ಬಳ್ಳಿಯ ಮಹಾಸಭೆಯಲ್ಲಿ ನಿರ್ಣಯಿಸಿದ ಪ್ರಮುಖ ವಿಷಯಗಳು‌…..

Suddi Sante Desk

ಹುಬ್ಬಳ್ಳಿ ಧಾರವಾಡ –

ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.ರಿ.ರಾಜ್ಯ ಘಟಕ ಹುಬ್ಬಳ್ಳಿ
REF.NO.192/2021-2022
DATE09-01-2022

??ನಿವೇದನೆ??
ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾ.ಶಾ.ಶಿ.ಸಂಘ.ರಾಜ್ಯ ಹಾಗೂ ಎಲ್ಲಾ ಜಿಲ್ಲಾ/ತಾಲೂಕಾ ಘಟಕಗಳು & ನಾಡಿನ ಸಮಸ್ತ ಗುರು ಬಳಗದವರಲ್ಲಿ ನಿವೇದನೆ ಮಾಡಿಕೊಳ್ಳುತ್ತಿರುವುದೇನೆಂದರೆ
ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ, ರಾಜ್ಯ ಘಟಕ ಹುಬ್ಬಳ್ಳಿ ದಿನಾಂಕ 25-12-2021 ರಂದು ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢಾ ಮಠದ ಕಲ್ಯಾಣ ಮಂಟಪದಲ್ಲಿ ನಡೆದ ಸಂಘದ ರಾಜ್ಯ ಮಟ್ಟದ ಎರಡನೇ ಮಹಾ ಸಭೆಯಲ್ಲಿ ತೀರ್ಮಾನಿಸಿದಂತೆ ರಾಜ್ಯದ ಎಲ್ಲ ಗ್ರಾಮೀಣ ಭಾಗದ ಶೇಕಡಾ 8 ರೂ. ಮನೆ ಬಾಡಿಗೆ ಭತ್ಯೆ ಪಡೆಯುವಂತಹ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ -ಶಿಕ್ಷಕಿಯರು ₹500 ಅನ್ನು ಒಂದು ಬಾರಿ ಮಾತ್ರ ನೀಡಿ ಆಜೀವ ಸದಸ್ಯತ್ವ ಪಡೆಯುವ ಬಗ್ಗೆ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ನಿರ್ಣಯವನ್ನು ಕೈಗೊಂಡಿದ್ದಾರೆ.
ಯಾರು 500 ರೂಪಾಯಿಗಳನ್ನು ಸಂದಾಯ ಮಾಡಿ ಆಜೀವ ಸದಸ್ಯತ್ವ ಪಡೆದುಕೊಳ್ಳುತ್ತಾರೆಯೋ ಅವರು ಮಾತ್ರ ಮುಂಬರುವ 2023 ರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಮತದಾನ ಮಾಡಲು ಅರ್ಹರಾಗಿರುತ್ತಾರೆ.
ಹಾಗೂ ಯಾರು 500/- ರೂ ಕೊಟ್ಟು ಸಂದಾಯ ಮಾಡಿ ರಸೀದಿ ಪಡೆದಿರುತ್ತಾರೆಯೋ ಅವರು ಮಾತ್ರ ಮತದಾರರ ಪಟ್ಟಿಯಲ್ಲಿ ಬರುತ್ತಾರೆ.
ತಾಲೂಕಾ /ಜಿಲ್ಲಾ/ ರಾಜ್ಯ ಮಟ್ಟದಲ್ಲಿ ನಡೆಯುವ ನಿರ್ದೇಶಕರ, ಪದಾಧಿಕಾರಿಗಳ ಚುನಾವಣೆಗೆ ಇದು ಕಡ್ಡಾಯವಾಗಿರುತ್ತದೆ ಎಂದು ರಾಜ್ಯಾಧ್ಯಕ್ಷರಾದ ಅಶೋಕ ಎಂ ಸಜ್ಜನ ಹಾಗೂ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಉಪ್ಪಿನ,ರಾಜ್ಯ ಗೌರವಾಧ್ಯಕ್ಷರಾದ ಎಲ್ ಐ ಲಕ್ಕಮ್ಮನವರ,ರಾಜ್ಯ ಕಾರ್ಯಾಧ್ಯಕ್ಷರುಗಳಾದ ಶರಣಪ್ಪಗೌಡ ಆರ್ ಕೆ ಶ್ರೀಮತಿ ಎಮ್.ವಿ,ಕುಸುಮಾ.ರಾಜ್ಯ ಕೋಶಾಧ್ಯಕ್ಷ ರಾದ ಬಿ ವಿ ಅಂಗಡಿ,ಹಾಗೂ ರಾಜ್ಯ ಘಟಕದ ರಾಜ್ಯ ಉಪಾಧ್ಯಕ್ಷರ ಗಳು,ರಾಜ್ಯ ಸಹ ಕಾರ್ಯದರ್ಶಿಗಳು,ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಹಾಗೂ ರಾಜ್ಯ ಕಾರ್ಯಕಾರಿ ಸಮಿತಿ ಯ ಸದಸ್ಯರೆಲ್ಲರೂ ರಾಜ್ಯದ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ಮನವಿ ಮಾಡಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ಪದಾಧಿಕಾರಿಗಳ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ
1.ರಾಜ್ಯಾಧ್ಯಕ್ಷರು-9036124574
2.ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಗಳು -9741340206
ಗೌರವಾನ್ವಿತ ವಂದನೆಗಳೊಂದಿಗೆ
ತಮ್ಮೆಲ್ಲರ ಸೇವಾಕಾಂಕ್ಷಿಗಳು
ರಾಜ್ಯಾಧ್ಯಕ್ಷರು ಹಾಗೂ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಗಳು
KGRPSTA(R) STATE UNIT HUBBALLI

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.