ಹುಬ್ಬಳ್ಳಿ ಧಾರವಾಡ –
ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಧಾರವಾಡ ಶಹರದ ವಾರ್ಡ್ ನಂ.10 ರ ಹಳಿಯಾಳ ರಸ್ತೆಯಿಂದ ರಾಧಾಕೃಷ್ಣ ನಗರವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಅರವಿಂದ್ ಬೆಲ್ಲದ್ ಭೂಮಿ ಪೂಜೆ ಮಾಡಿ ಚಾಲನೆ ನೀಡಿದರು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಬಸವರಾಜ ಗರಗ,ಪಾಲಿಕೆ ಸದಸ್ಯರಾದ ಶ್ರೀಮತಿ ಚಂದ್ರಕಲಾ ಕೊಟಬಾಗಿ,ಮುಖಂಡರಾದ ಷಣ್ಮುಖ ಹಟ್ಟಿಯವರ, ಅರವಿಂದ ಆಲದಕಟ್ಟಿ,ಶಾಂತೇಶ್ ಚಿಕ್ಕಲಕಿ,ಶಂಕರ್ ಕೊಟ್ರಿ, ರಾಜು ಕೊಟಬಾಗಿ,ಶ್ರೀಮತಿ ಶೋಭಾ ಭುಜಂಗನವರ್, ರಾಜು ತಿಗಡಿಮಠ,ಗಿರೀಶ್ ಶೆಲ್ಲಿಕೇರಿ,ಪವನ ಗೌಡ್ರು, ಶರಣು ಬೆನಕೊಪ್ಪ,ಸಂತೋಷ ಎಸ್ ಎಮ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.