ಹುಬ್ಬಳ್ಳಿ –
NCP ಪಕ್ಷ ಸೇರ್ಪಡೆ ರಾಜು ಅನಂತಸಾ ನಾಯಕವಾಡಿ ನಿರ್ಧಾರ – ಡಿಸೆಂಬರ್ 28 ರಂದು ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಎನ್ ಸಿಪಿ ಪಕ್ಷ ಸೇರ್ಪಡೆಯಾಗಲಿದ್ದಾರೆ ರಾಜು ನಾಯಕವಾಡಿ
ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ ಯಾವ ಪಕ್ಷ ಸೇರ್ಪಡೆಯಾಗಬೇಕು ಎಂಬ ಚಿಂತನೆಯಲ್ಲಿದ್ದ ರಾಜು ಅನಂತಸಾ ನಾಯಕ ವಾಡಿ ಕೊನೆಗೂ ಎನ್ ಸಿಪಿ ಪಕ್ಷ ಸೇರ್ಪಡೆಯಾ ಗಲು ನಿರ್ಧಾರವನ್ನು ಕೈಗೊಂಡಿದ್ದಾರೆ.ಹೌದು ವಿಧಾನಸಭಾ ಚುನಾವಣೆಯ ಬಳಿಕ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆಯನ್ನು ಘೋಷಣೆ ಮಾಡಿ ದ್ದಾರೆ.
ಇದರ ಬೆನ್ನಲ್ಲೇ ಬೇರೆ ಬೇರೆ ಪಕ್ಷದವರಿಗೆ ರಾಜು ನಾಯಕವಾಡಿಯವರಿಗೆ ಆಮಂತ್ರಣವನ್ನು ನೀಡಿದ್ದರು.ಇದೇಲ್ಲದರ ನಡುವೆ ಸಧ್ಯ ಎನ್ ಸಿಪಿ ಪಕ್ಷವನ್ನು ಸೇರ್ಪಡೆಯಾಗಲು ರಾಜು ನಾಯಕ ವಾಡಿಯವರು ನಿರ್ಧಾರವನ್ನು ಕೈಗೊಂಡಿದ್ದಾರೆ.
ಎನ್ ಸಿಪಿ ಪಕ್ಷದ ರಾಜ್ಯಾಧ್ಯಕ್ಷ ಸಿ ಎಸ್ ಇನಾ ಮದಾರ ಅವರು ಎರಡು ಬಾರಿ ರಾಜು ನಾಯಕ ವಾಡಿ ಯವರನ್ನು ಭೇಟಿ ಮಾಡಿ ಚರ್ಚೆಯನ್ನು ಮಾಡಿದ್ದರು.ಸಧ್ಯ ರಾಜು ನಾಯಕವಾಡಿ ಯವರು ಹುಬ್ಬಳ್ಳಿಯ ಯೂಥ್ ಐಕಾನ್ ಆಗಿದ್ದು ಅವಳಿ ನಗರದ ರಾಜ್ಯದ ಪ್ರಮುಖ ಸಮಸ್ಯೆಗಳ ಕುರಿತಂತೆ ಸದಾ ಧ್ವನಿ ಎತ್ತುತ್ತಿರುವ ರಾಜು ನಾಯಕವಾಡಿಯವರು ಬರುವ ಲೋಕಸಭಾ ಚುನಾವಣೆಯಲ್ಲಿ ಅಖಾಡಕ್ಕಿಳಿಯಲು ಮುಂದಾ ಗಿದ್ದು
ಹೀಗಾಗಿ ಇವರ ಸಾಧನೆ ಹೋರಾಟ ಹೀಗೆ ಎಲ್ಲ ವನ್ನು ತಿಳಿದುಕೊಂಡಿರುವ ಎನ್ ಸಿಪಿ ಪಕ್ಷದವರು ರಾಷ್ಟ್ರೀಯ ಅಧ್ಯಕ್ಷ ಶರತ್ ಪವಾರ ರೊಂದಿಗೆ ಚರ್ಚೆಯನ್ನು ಮಾಡಿದ್ದು ಡಿಸೆಂಬರ್ 28 ರಂದು ಮೊದಲ ಹಂತವಾಗಿ ಪಕ್ಷದ ರಾಜ್ಯಾಧ್ಯಕ್ಷ ಸಿ ಎಸ್ ಇನಾಮದಾರ,ಕಾರ್ಯಾಧ್ಯಕ್ಷ ಜಿ ಎಮ್ ಡೊಳ್ಳಿ,
ರಾಜ್ಯ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಹೇಮಾವತಿ, ರವರ ಸಮ್ಮುಖದಲ್ಲಿಯೇ ಹುಬ್ಬಳ್ಳಿ ಯಲ್ಲಿ ಸೇರ್ಪಡೆಯಾಗಲು ನಿರ್ಧಾರವನ್ನು ಕೈಗೊಂಡಿದ್ದಾರೆ.ನಗರದಲ್ಲಿ ಪಕ್ಷದ ರಾಜ್ಯ ನಾಯಕರ ಸಮ್ಮುಖದಲ್ಲಿಯೇ ಸೇರ್ಪಡೆಯಾ ಗಲಿದ್ದು ಇವರೊಂದಿಗೆ ಮುಖಂಡರು
ಕಾರ್ಯ ಕರ್ತರು ಆಪ್ತರು ಸೇರಿದಂತೆ ಹಲವರು ಸಾಮಾ ಹಿಕವಾಗಿ ಸೇರ್ಪಡೆಯಾಗಲಿದ್ದಾರೆ ಎಂದು ರಾಜು ಅನಂತಸಾ ನಾಯಕವಾಡಿಯ ವರು ಪತ್ರಿಕಾ ಪ್ರಕಟಣೆಯ ಮೂಲಕ ಮಾಹಿತಿ ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..