ರಾಜ್ಯ ಮಟ್ಟದ CRP,BRP ಅವರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ (ರಿ) ಮೈಸೂರು ನಿಂದ ನೀಡುವ ಪ್ರಶಸ್ತಿ

Suddi Sante Desk

ಮೈಸೂರು –

ರಾಜ್ಯಮಟ್ಟದ ಉತ್ತಮ ನಿಕಟಪೂರ್ವ ಮತ್ತು ಕಾರ್ಯ ನಿರ್ವಹಿಸುತ್ತಿರುವ ಸಿಆರ್ ಪಿ ಗಳಿಗಾಗಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್(ರಿ)ಮೈಸೂರು ಇವರ ವತಿಯಿಂದ 2021-22 ನೇ ಸಾಲಿನಲ್ಲಿ ತಮ್ಮ ಕ್ಲಸ್ಟರ್ ಗಳಲ್ಲಿ ವಿನೂತನವಾದ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು ಶೈಕ್ಷಣಿಕ ಪ್ರಗತಿಗಾಗಿ ಶ್ರಮವಹಿಸಿದ ನಿಕಟಪೂರ್ವ CRP ಗಳಿಗೆ ಶೈಕ್ಷಣಿಕ ಸೇವಾ ರತ್ನ 2021-22 ಪ್ರಶಸ್ತಿಯನ್ನು ನೀಡಲಾಗುತ್ತಿದೆ.ಅರ್ಹ ನಿಕಟಪೂರ್ವ ಸಿಆರ್ ಪಿಗಳು ಈ ಕೆಳಗಿನ ನಂಬರ್ ಗೆ ಕರೆ ಮಾಡಿ ಸಂಪೂರ್ಣ ಮಾಹಿತಿ ಪಡೆಯಲು ಸೂಚನೆ ನೀಡಲಾಗಿದೆ.

ಹಾಗೂ ಪ್ರಸಕ್ತ ಕಾರ್ಯನಿರ್ವಹಣೆ ಮಾಡುತ್ತಿರುವ ಸಿಆರ್ ಪಿಗಳಿಗೆ ಶಿಕ್ಷಣ ಸಾರಥಿ 2021-22 ಪ್ರಶಸ್ತಿ ನೀಡಲಾಗುತ್ತಿದೆ

ಈ ಪ್ರಶಸ್ತಿಗಳನ್ನು ತಾಲ್ಲೂಕು,ವಲಯಕ್ಕೊಂದರಂತೆ ಗುರುತಿಸಿ ಗೌರವಿಸಲಾಗುವುದು ತಮ್ಮ ಮಾಹಿತಿಯ ನೋಂದಣಿಗೆ ಕಡೆಯ ದಿನಾಂಕ 08-04-2022.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಸಂತೋಷ್ ಬಂಡೆ -7813045115
ವಿ.ಜಿ.ಅಗ್ರಹಾರ -8073140916
ಶಿವು ಮಡಿಕೇಶ್ವರ -9742652043

ಮಾನ್ಯರೆ ನಿಮಗೆ ಪರಿಚಯ ಇರುವ CRP ಗಳಿಗೆ. ಮತ್ತು ನಿಕಟಪೂರ್ವ CRP ಗಳಿಗೆ ಈ ಒಂದು ಮಾಹಿತಿಯನ್ನು ಕಳಿಸಿ.ಈ ಬಗ್ಗೆ ತಿಳಿಸಿ ಅವರಿಗೂ ಅನುಕೂಲ ಮಾಡಿಕೊಡಿ ಎಂದು ಸಂಸ್ಥೆಯ ಮುಖ್ಯಸ್ಥರು ಕರೆ ನೀಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.