This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Sports News

ಕೇಂದ್ರ ಮಾದರಿಯ 7ನೇ ವೇತನದ ವಿಚಾರದಲ್ಲಿ ಉಲ್ಟಾ ಹೊಡೆದ ಮುಖ್ಯಮಂತ್ರಿ – ಮೊನ್ನೆ ಅಕ್ಬೋಬರ್ ನಲ್ಲಿ ಅಂತಾ ಹೇಳಿ ಈಗ ಸದನದಲ್ಲಿ ಹೇಳಿದ್ದು ಬೇರೆ

WhatsApp Group Join Now
Telegram Group Join Now

ಬೆಂಗಳೂರು –

ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ 7ನೇ ವೇತನ ನೀಡುವ ವಿಚಾರದಲ್ಲಿ ಅಕ್ಟೋಬರ್ ನಲ್ಲಿ ಸಮಿತಿ ಯೊಂದನ್ನು ರಚನೆ ಮಾಡೊದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೆಪ್ಟಂಬರ್ 6 ರಂದು ರಾಜ್ಯದ ಸರ್ಕಾರಿ ನೌಕರರಿಗೆ ಸರ್ವೋತ್ತಮ ಪ್ರಶಸ್ತಿ ಪ್ರಧಾನ ಮಾಡುವ ಸಮಯದಲ್ಲಿ ಹೇಳಿದ್ದರು. ಈ ಒಂದು ಹೇಳಿಕೆ ನೀಡಿ ಮಾತನ್ನಾಡಿ ಎಂಟು ದಿನದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಲ್ಟಾ ಹೊಡೆದಿದ್ದಾರೆ.

ಹೌದು ಅಧಿವೇಶನದಲ್ಲಿ ಈ ಕುರಿತಂತೆ ವಿಧಾನ ಸಭೆಯಲ್ಲಿ ರಾಯಭಾಗ ಶಾಸಕ ಐಹೋಳೆ ಮಹಾಲಿಂಗಪ್ಪ ಅವರು ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಇತರೆ ಭತ್ಯೆಗಳ ವಿಚಾರ ಕುರಿತಂತೆ ಪ್ರಸ್ತಾಪ ವನ್ನು ಮಾಡಿದ್ದಾರೆ.ರಾಜ್ಯದ ನೌಕರರಿಗೂ ಕೇಂದ್ರ ಸರ್ಕಾರದ ನೌಕರರ ವೇತನಕ್ಕೂ ಗಣನೀಯವಾದ ವ್ಯತ್ಯಾಸವಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ಪ್ರಶ್ನೆ ಕೇಳಿದ್ದಾರೆ ಈ ಒಂದು ಪ್ರಶ್ನೆಗೆ ಮುಖ್ಯಮಂತ್ರಿ ಅವರು ಉತ್ತರಿಸಿ ರಾಜ್ಯ ಸರ್ಕಾರವು ಸಾಂಪ್ರದಾಯಿಕ ವಾಗಿ ಕೇಂದ್ರ ಸರ್ಕಾರ ಇತರ ರಾಜ್ಯ ಸರ್ಕಾರ ಸರ್ಕಾರಗಳು ರಚಿಸುವ ವೇತನ ಪರಿಷ್ಕರಣೆಯ ಅವಧಿಯನ್ನು ಅನುಸ ರಿಸದೇ ತನ್ನದೇಯಾದ ವೇತನ ಸಮಿತಿಗಳಂತಹ ತಜ್ಞ ಸಮಿತಿಗಳ ಶಿಪಾರಸ್ಸಿನ ಮೇಲೆ ವೇತನ ರಚನೆಯನ್ನು ಅಳವಡಿಸಿಕೊಂಡಿದ್ದು ಅದನ್ನು ಕಾಲದಿಂದ ಕಾಲಕ್ಕೆ ಪರಿಷ್ಕರಿಸಿಕೊಂಡು ಬಂದಿರುತ್ತದೆ ಇದು ರಾಜ್ಯ ಸರ್ಕಾರದ ನೀತಿಯಾಗಿರುತ್ತದೆ ಆದುದರಿಂದ ಕೇಂದ್ರ ಸರ್ಕಾರದ ನಿಯಮಗಳು ಮತ್ತು ಕೇಂದ್ರ ವೇತನ ಆಯೋಗ ಮತ್ತು ಇತರ ರಾಜ್ಯಗಳ ವೇತನ ಆಯೋಗಗಳ ಶಿಪಾರಸ್ಸುಗಳನ್ನು ರಾಜ್ಯ ಸರ್ಕಾರದ ನೌಕರರಿಗೆ ಹೋಲಿಸಿ ಅನ್ವಯಿಸಲು ಬರುವುದಿಲ್ಲ ಎಂದು ಉತ್ತರ ನೀಡಿದ್ದಾರೆ.

ಇನ್ನೂ ಸರ್ಕಾರಿ ನೌಕರರ ಬಹು ನಿರೀಕ್ಷಿತ 7ನೇ ವೇತನ ಆಯೋಗವನ್ನು ರಚಿಸಿ ನೌಕರರ ವೇತನ ಮತ್ತು ಭತ್ಯೆಗ ಳನ್ನು ಪರಿಷ್ಕರಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಯೇ ಎಂದು ಪ್ರಶ್ನೆ ಕೇಳಿದ್ದು ಈ ಒಂದು ಪ್ರಶ್ನೆಗೆ ಮುಖ್ಯ ಮಂತ್ರಿ ಅವರು ಉತ್ತರಿಸಿ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಯ ವಿಷಯವು ಸರ್ಕಾರದ ನೀತಿ ನಿರ್ಣಯಕ್ಕೆ ಸಂಭಂಧಿಸಿದ ವಿಷಯವಾ ಗಿದ್ದು ರಾಜ್ಯದ ಆರ್ಥಿಕ ಸ್ಥಿತಿಗತಿಯನ್ನು ಗಮನದಲ್ಲಿಸಿ ಕೊಂಡು ಸಂದರ್ಭಾನುಸಾರವಾಗಿ ಕ್ರಮ ಕೈಗೊಳ್ಳಲಾಗು ವುದು ಎಂದು ಉತ್ತರ ನೀಡಿದ್ದಾರೆ.

ಅರೇ ನೀವು ಸೆಪ್ಟಂಬರ್ 6 ರಂದು ಬೆಂಗಳೂರಿನಲ್ಲಿ ಅಕ್ಟೋಬರ್ ನಲ್ಲಿ ಈ ಕುರಿತಂತೆ ಸಮಿತಿಯೊಂದನ್ನು ರಚನೆ ಮಾಡೊದಾಗಿ ಹೇಳಿದ್ದಿರಿ ಈಗ ಆರ್ಥಿಕ ಪರಸ್ಥಿತಿ ನೋಡಿಕೊಂಡು ಸಂದರ್ಭಾನುಸಾರವಾಗಿ ಆರ್ಥಿಕ ಪರಸ್ಥಿತಿಯನ್ನು ನೋಡಿಕೊಂಡು ಮಾಡೊದಾಗಿ ಹೇಳಿದ್ದು ಇದರಲ್ಲಿ ಯಾವುದು ಸತ್ಯ ಹಾಗಾದರೆ ಮೊನ್ನೆ ನೀವು ಹೇಳಿದ ಮಾತುಗಳು ಭರವಸೆಯ ಇವತ್ತು ದಾಖಲೆಯ ರೂಪದಲ್ಲಿ ನೀಡಿದ ಉತ್ತರವೇ ದಾಖಲೆಯಾ ಹೇಳಿ ಮುಖ್ಯಮಂತ್ರಿ ಅವರೇ…..


Google News

 

 

WhatsApp Group Join Now
Telegram Group Join Now
Suddi Sante Desk