ಬೆಂಗಳೂರು –
ರಾಜ್ಯದ ಸರಕಾರಿ ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಸಿಬ್ಬಂದಿಗಳಿಗೆ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ ಹೀಗಾಗಿ ಅವರು ಇನ್ಮುಂದೆ ಮತ್ತಷ್ಟು ಹೈಟೆಕ್ ಆಗಿ ಕಾಣಲಿದ್ದಾರೆ.
ಶಾಲಾ ವಿದ್ಯಾರ್ಥಿಗಳಿಗೆ ಇರುವ ರೀತಿಯಲ್ಲೆ ಸಿಬ್ಬಂದಿಗೆ ವಸ್ತ್ರಸಂಹಿತೆಯನ್ನು ಶಿಕ್ಷಣ ಇಲಾಖೆಯು ಜಾರಿ ಮಾಡಿದೆ.ಅಡುಗೆ ಸಿಬ್ಬಂದಿ ಇನ್ಮುಂದೆ ಏಪ್ರಾನ್, ತಲೆಗವಸು ಮತ್ತು ಕೈಗವಸು ಗಳನ್ನು ಧರಿಸಬೇಕು ಎಂಬ ಸೂಚನೆಗಳನ್ನು ನೀಡಿ ಹೊಸದಾಗಿ ಆದೇಶವನ್ನು ಮಾಡಲಾಗಿದೆ
ಯಾವುದೇ ಕಾರಣಕ್ಕೂ ಕೈ ಬಳೆ ತೊಟ್ಟಿರಬಾ ರದು ಇಷ್ಟು ದಿನ ಈ ನಿಯಮಗಳು ಜಾರಿ ಯಲ್ಲಿದ್ದರೂ ನಿಗಾ ವಹಿಸುತ್ತಿರಲಿಲ್ಲ ಇನ್ಮುಂದೆ ಬಿಸಿಯೂಟ ವಿತರಣೆ ಪೂರ್ವದಲ್ಲಿ ಶಾಲಾ ಮುಖ್ಯ ಶಿಕ್ಷಕರು, ಎಸ್ಡಿಎಂಸಿ ಸಮಿತಿ ಸದಸ್ಯರು,
ನೋಡಲ್ ಶಿಕ್ಷಕರು, ಓರ್ವ ಅಡುಗೆ ಸಹಾಯಕರ ತಂಡ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ವಿತರಿಸುವ ಬಿಸಿಯೂಟದ ಶುಚಿ-ರುಚಿ ಜೊತೆಗೆ, ಸಿಬ್ಬಂದಿ ವಸ್ತ್ರ ಸಂಹಿತೆಯ ಬಗ್ಗೆ ಗಮನ ನೀಡಿ ವರದಿ ನೀಡ ಬೇಕು ಎಂದು ಶಿಕ್ಷಣ ಇಲಾಖೆ ಯು ಎಸ್ಡಿಎಂಸಿ ಸದಸ್ಯರಿಗೆ ಸೂಚನೆ ನೀಡಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..