ಧಾರವಾಡ –
ಸರ್ಕಾರ ಜನಪ್ರತಿನಿಧಿಗಳು ಮಾಡಬೇಕಾದ ಕೆಲಸ ಕಾರ್ಯವನ್ನು ಸಾರ್ವಜನಿಕರು ಮಾಡಿದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣ ದಲ್ಲಿ ನಡೆದಿದೆ ಹೌದು ತೆಗ್ಗು ಬಿದ್ದ ರಸ್ತೆ ಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದುಕೊಂಡು ಎಚ್ಚೇತ್ತುಕೊಂಡು ಜನರೇ ನಿಂತು ಕೊಂಡು ತೆಗ್ಗು ಗುಂಡೆ ಗಳನ್ನು ಮುಚ್ಚಿದ್ದಾರೆ.
ನವಲಗುಂದ ಪಟ್ಟಣದಲ್ಲಿ ಮುಖ್ಯ ರಸ್ತೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ತೆಗ್ಗು ಗುಂಡಿಗಳು ಬಿದ್ದಿ ದ್ದವು ಇವುಗಳನ್ನು ಸಾರ್ವಜನಿಕರು ತಾವೇ ನಿಂತುಕೊಂಡು ಮುಚ್ಚಿದರು
ರಸ್ತೆ ಗುಂಡಿ ಮುಚ್ಚದಿರುವುದಕ್ಕೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದರು.ಲೋಕೋಪಯೋಗಿ ಅಧಿಕಾರಿಗಳ ನಡೆಗೆ ಸಾರ್ವಜನಿಕರು ಆಕ್ರೋಶ ಗೊಂಡಿದ್ದರು.ತಗ್ಗು ಗುಂಡಿಗಳಿಂದ ವಾಹನ ಸವಾರರ ಸಂಚಾರಕ್ಕೆ ತೊಂದರೆಯಾಗಿತ್ತು.ಎಂ ಸ್ಯಾಂಡ್, ಜಲ್ಲಿಕಲ್ಲನ್ನು ತುಂಬಿ ತಗ್ಗು , ಗುಂಡಿ ಮುಚ್ಚಿದ ಸಾರ್ವಜನಿಕರು.
ಸುದ್ದಿ ಸಂತೆ ನ್ಯೂಸ್ ನವಲಗುಂದ…..