ಧಾರವಾಡ –
ಧಾರವಾಡದ ಹೊಸ ಬಸ್ ನಿಲ್ದಾಣದ ಬಳಿ ಮತ್ತು ಹೊರ ವಲಯದ ಹೆದ್ದಾರಿಯಲ್ಲಿ ಖಾಸಗಿ ವಾಹನ ಹಾಗೂ ಬಸ್ ಗಳ ನಡುವೆ ರಸ್ತೆ ಅಪಘಾತ ಸಂಭವಿಸಿದ್ದಸ್ವಲ್ಪದರಲ್ಲಿಯೇ ಕಾರಿನಲ್ಲಿದ್ದವರು ಪಾರು ಆಗಿದ್ದಾರೆ.ಹೌದು ಧಾರವಾಡ ಹೊಸ್ ಬಸ್ ನಿಲ್ದಾಣದ ಬಳಿ ಖಾಸಗಿ ಕಾರು ಹಾಗೂ ಸಾರಿಗೆ ಬಸ್ ನಡುವೆ ಅಪಘಾತ ಸಂಭವಿಸಿದ್ದು ಅದೃಷ್ಟ ವಸಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಇನ್ನೂ ಇತ್ತ ಹೊರವಲಯದ ಹೆದ್ದಾರಿಯಲ್ಲಿ ಕಾರು ಮತ್ತು ಲಾರಿ ನಡುವೆ ಮತ್ತೊಂದು ಅಪಘಾತವಾಗಿದ್ದು ಕಾರಿನ ಮುಂದಿನ ಭಾಗ ಸಂಪೂರ್ಣವಾಗಿ ಜಖಂ ಆಗಿದೆ.ಇನ್ನೂ ಹೀಗೆ ಅಪಘಾತಗಳು ಸಂಭವಿಸುತ್ತಿದ್ದು ಈ ರಸ್ತೆಯಲ್ಲಿ ರಸ್ತೆ ತಡೆ ಕೊರತೆಯಿಂದ ವಾಹನ ಸವಾರರು ರಬಸವಾಗಿ ವಾಹನ ಚಲಾಯಿಸುವುದರಿಂದ ಇಂತಹ ಅವಘಡಗಳು ಮರುಕರಳಿಸುತ್ತಿರುತ್ತವೆ.
ಈ ಕುರಿತು ಅನೇಕ ಬಾರಿ ಸಾರ್ವಜನಿಕರು ಹೇಳಿದರು ಕೂಡಾ ಸಂಭಂದಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳದಿರು ವುದು ವಿಪರ್ಯಾಸ. ಇತ್ತ ಅಪಘಾತ ಸ್ಥಳಕ್ಕೆ ಧಾರವಾಡ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ
ವರದಿ ಶ್ರೇಯಾನ್ ಜೊತೆ ಗೋಪ್ಯಾ ಸುದ್ದಿ ಸಂತೆ ನ್ಯೂಸ್ ಧಾರವಾಡ