ಹುಬ್ಬಳ್ಳಿ –
ಇಂದಿನಿಂದ ಹರ್ ಘರ್ ತಿರಂಗಾ ಅಭಿಯಾನ ಆರಂಭದ ಹಿನ್ನಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹುಬ್ಬಳ್ಳಿ ಯಲ್ಲಿ ತಿರಂಗಾ ಧ್ವಜಾರೋಹನ ಮಾಡಿದರು.ಮನೆಯ ಮುಂದೆ ತಿರಂಗಾವನ್ನು ಹಾರಿಸಿದರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು.
ತಮ್ಮ ಪತ್ನಿ ಜ್ಯೋತಿ ಜೊತೆಗೆ ಮನೆ ಮುಂದೆ ತಿರಂಗಾ ಹಾರಿಸಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಚಾಲನೆ ನೀಡಿದರು.ಹುಬ್ಬಳ್ಳಿ ಯ ಮಯೂರ ಎಸ್ಟೇಟ್ ನಲ್ಲಿರುವ ಪ್ರಹ್ಲಾದ್ ಜೋಶಿಯ ವರ ಮನೆ ಮುಂದೆ ಈ ಒಂದು ಕಾರ್ಯಕ್ರಮ ನಡೆಯಿತು
ಧ್ವಜಾರೋಹಣ ಮಾಡಿದ ಸಚಿವರು ವಂದೇ ಮಾತರಂ ವಂದೇ ಮಾತರಂ ಎನ್ನುತ್ತಾ ಘೋಷಣೆಗಳನ್ನು ಕೂಗಿದರು ಇದೇ ವೇಳೆ ಜೋಶಿ ಅವರಿಗೆ ಅವರ ಆಪ್ತ ಕಾರ್ಯದರ್ಶಿ ಗಳಾದ ಮುರಳಿಧರ ಮಾಳಗಿ.ಮಲ್ಲಿಕಾರ್ಜುನ ಪಾಟೀಲ.
ಚಂದ್ರಶೇಖರ ಬೆಳವಾಡಿ,ಅಶೋಕ ಬನ್ನಿಕೊಪ್ಪ,ಶಂಕರ ವಾಲೀಕರ,ರಾಘವೇಂದ್ರ ಯರಕದ.ಸದಾನಂದ ಪೂಜಾರ, ಪ್ರವೀಣ ಶೀಲವಂತರ.ನಾಗೇಶ ಖೇಣಿ,ಕುರ್ತಕೋಟಿ, ಸಂತೋಷ ಚವ್ಹಾಣ,ತಿಪ್ಪಣ್ಣ ಮಜ್ಜಗಿ ಸೇರಿದಂತೆ ಹಲವರು ಉಪಸ್ಥಿತರಿದ್ದು ಸಾಥ್ ನೀಡಿದರು.