ಸಾವಿನಲ್ಲೂ ಸಾರ್ಥಕತೆ ಮೆರೆದ ಯಾದವಾಡ ಗ್ರಾಮದ ಗದಿಗೆಪ್ಪ ಕೋಯಪ್ಪನವರ – ದೇಹವನ್ನು ವೈದ್ಯಕೀಯ ಜ್ಞಾನಾರ್ಜನೆ ಮತ್ತು ಸಂಶೋಧನೆಗೆ ನೀಡಿ ಮಾದರಿಯಾದ ಹಿರಿಯ ಜೀವಿ

Suddi Sante Desk
ಸಾವಿನಲ್ಲೂ ಸಾರ್ಥಕತೆ ಮೆರೆದ ಯಾದವಾಡ ಗ್ರಾಮದ ಗದಿಗೆಪ್ಪ  ಕೋಯಪ್ಪನವರ – ದೇಹವನ್ನು ವೈದ್ಯಕೀಯ ಜ್ಞಾನಾರ್ಜನೆ ಮತ್ತು ಸಂಶೋಧನೆಗೆ ನೀಡಿ ಮಾದರಿಯಾದ ಹಿರಿಯ ಜೀವಿ

ಧಾರವಾಡ

ಸಾವಿನಲ್ಲೂ ವಯೋವೃದ್ದರೊಬ್ಬರು ದೇಹವನ್ನು ವೈದ್ಯಕೀಯ ಜ್ಞಾನಾರ್ಜನೆ ಮತ್ತು ಸಂಶೋಧನೆಗೆ ನೀಡಿ ಸಾರ್ಥಕತೆ ಮೆರೆದ ಘಟನೆ ಧಾರವಾಡ ದ ಯಾದವಾಡ ಗ್ರಾಮದಲ್ಲಿ ನಡೆದಿದೆ. ಹೌದು ತಾಲೂಕಿನ ಯಾದವಾಡ ಗ್ರಾಮದ ವೃದ್ಧರೊ ಬ್ಬರು ದೇಹದಾನ ಮಾಡುವ ಮೂಲಕ ಸಾವಿನ ಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ. ಗದಿಗೆಪ್ಪ ನಿಂಗಪ್ಪ ಕೋಯಪ್ಪನವರ (88) ರೈತಾಪಿ ಕುಟುಂ ಬದಲ್ಲಿ ಜನಸಿ ಬುಧವಾರ ಸಹಜಸಾವಿಗೆ ಈಡಾಗಿ ದ್ದಾರೆ.

ತಾವು ಮರಣದ ನಂತರ ತನ್ನ ದೇಹವನ್ನು ವೈದ್ಯ ಕೀಯ ಜ್ಞಾನಾರ್ಜನೆ ಮತ್ತು ಸಂಶೋಧನೆಗೆ ಸಮರ್ಪಿಸುವುದಾಗಿ ಹೇಳಿ 2012ರಲ್ಲಿ ಹುಬ್ಬಳ್ಳಿ ಯ ಕಿಮ್ಸ್ ಗೆ  ದೇಹ ಹಾಗೂ ಎಂ.ಎಂ. ಜೋಶಿ ಸಂಸ್ಥೆಗೆ ನೇತ್ರದಾನ ಮಾಡಿದ್ದಾರೆ. ಗದಿಗೆಪ್ಪ ಅವರ ಆಶಯದಂತೆ ಇವರ ಕುಟುಂಬದವರು ಹುಬ್ಬಳ್ಳಿ ಕಿಮ್ಸ್ ಹಾಗೂ ಎಂ.ಎಂ. ಜೋಶಿ ಆಸ್ಪತ್ರೆಗೆ ವೈದ್ಯ ರನ್ನು ಸಂಪರ್ಕಿಸಿ ಮೃತದೇಹವನ್ನು ಹಸ್ತಾಂತರಿ ಸಿದ್ದಾರೆ.

ಮೃತರ ಮನೆಯಲ್ಲಿಯೇ ನೇತ್ರವನ್ನು ಸುರಕ್ಷಿತ ವಾಗಿ ತೆಗೆದುಕೊಂಡು ಹೋಗಲಾಯಿತು. ಹಿರಿಯ ಜೀವಿ ಗದಿಗೆಪ್ಪ ದೇಹದಾನ ಮಾಡಿರುವ ವಿಷಯ ತಿಳಿದ ಗ್ರಾಮಸ್ಥರು ಅಂತಿಮ ನಮನ ಸಲ್ಲಿಸಿ ವಿದಾಯ ಹೇಳಿದರು.ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧುಗಳಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.