ಕಲಘಟಗಿ ಕ್ಷೇತ್ರದಲ್ಲಿ ಛಬ್ಬಿ ಟೀಮ್ ನಿಂದ ಮುಂದುವರೆದ ಕುಕ್ಕರ್ ವಿತರಣೆ – ಕಲಕೇರಿ ಗ್ರಾಮದಲ್ಲಿ ಪತಿಯ ಪರವಾಗಿ ಕುಕ್ಕರ್ ವಿತರಣೆ ಮಾಡಿದ ಶ್ರೀಮತಿ ಜ್ಯೋತಿ ಛಬ್ಬಿ ಮತ್ತು ಟೀಮ್

Suddi Sante Desk
ಕಲಘಟಗಿ ಕ್ಷೇತ್ರದಲ್ಲಿ ಛಬ್ಬಿ ಟೀಮ್ ನಿಂದ ಮುಂದುವರೆದ ಕುಕ್ಕರ್ ವಿತರಣೆ – ಕಲಕೇರಿ ಗ್ರಾಮದಲ್ಲಿ ಪತಿಯ ಪರವಾಗಿ ಕುಕ್ಕರ್ ವಿತರಣೆ ಮಾಡಿದ ಶ್ರೀಮತಿ ಜ್ಯೋತಿ ಛಬ್ಬಿ ಮತ್ತು ಟೀಮ್

ಕಲಘಟಗಿ

ಧಾರವಾಡದ ಕಲಘಟಗಿ ವಿಧಾನ ಸಭಾ ಕ್ಷೇತ್ರ ದಲ್ಲಿ ಕಾಂಗ್ರೇಸ್ ಪಕ್ಷದ ನಾಗರಾಜ ಛಬ್ಬಿ ಟೀಮ್ ನ ಪ್ರವಾಸ ಮುಂದುವರೆದಿದೆ.ಕ್ಷೇತ್ರದಲ್ಲಿ ಈಗಾಗಲೇ ಕಳೆದ ಎರಡು ತಿಂಗಳಿನಿಂದ ಬಿಡುವಿಲ್ಲದೇ ತಿರುಗಾಡುತ್ತಿರುವ ನಾಗರಾಜ ಛಬ್ಬಿ ಮತ್ತು ಇವರ ಪತ್ನಿ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಮತ್ತು ಟೀಮ್ ನ ಸಂಚಾರ ಜೋರಾಗಿದೆ.

 

ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಹೋಗಿ ಗ್ರಾಮದಲ್ಲಿನ ಸಮಸ್ಯೆಗಳನ್ನು ಗ್ರಾಮಸ್ಥರೊಂದಿಗೆ ಸಭೆ ಮಾಡಿ ಆಲಿಸುತ್ತಾ ನಂತರ ಅವುಗಳನ್ನು ಪಟ್ಟಿ ಮಾಡಿಕೊಂಡು ಬರುವ ದಿನಗಳಲ್ಲಿ ಈಡೇರಿ ಸುವ ಕುರಿತಂತೆ ಭರವಸೆಯನ್ನು ನೀಡಿ ಕುಕ್ಕರ್ ಗಳನ್ನು ನೀಡುತ್ತಿದ್ದಾರೆ.

 

ಕ್ಷೇತ್ರದ ಕಲಕೇರಿ ಗ್ರಾಮದಲ್ಲಿ ಪತಿಯ ಪರವಾಗಿ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅವರು ಗ್ರಾಮದಲ್ಲಿ ಮಹಿಳೆಯರು ಮತ್ತು ಸಾರ್ವಜನಿಕ ರೊಂದಿಗೆ ವಿಶೇಷವಾದ ಸಭೆಯನ್ನು ಮಾಡಿ ನಂತರ ಕುಕ್ಕರ್ ವಿತರಣೆಗೆ ಚಾಲನೆ ನೀಡಿದರು

ಗ್ರಾಮದ ತುಂಬೆಲ್ಲಾ ಮನೆ ಮನೆಗೆ ತೆರಳಿದ ಇವರು ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಕುಕ್ಕರ್ ಗಳನ್ನು ನೀಡಿ ಶುಭಾಶಯಗಳನ್ನು ಕೋರಿ ಬರುವ ದಿನಗಳಲ್ಲಿ ಕಾಂಗ್ರೇಸ್ ಪಕ್ಷದ ನಾಗರಾಜ ಛಬ್ಬಿ ಅವರಿಗೆ ಕ್ಷೇತ್ರದಲ್ಲಿ ಇದೊಂದು ಬಾರಿ ಸೇವೆ ಯನ್ನು ಸಲ್ಲಿಸಲು ಅವಕಾಶವನ್ನು ನೀಡುವಂತೆ ಈ ಮೂಲಕ ಕೋರಿಕೊಂಡರು.

ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅವರೊಂದಿಗೆ ಚನ್ನಬಸಪ್ಪ ಮಂಗಳಗಟ್ಟಿ,ಕಲ್ಲಪ್ಪ ಬಾಂಗಡಿ, ಮಲ್ಲವ್ವ ಹಿರೇಮಠ,ಸಯ್ಯದ ವಾಲೀಕಾರ, ಆನಂದ ವಡ್ಡರ,ಮಂಜುನಾಥ ಮೊರಬದ,ಶಂಕರ ಮುಗಲಿ,ಆಜೀಜ ದೇವಗಾಂ,ಸುನಂದಾ ಬಡಿಗೇರ ಯಸೂಫ್,ಭಾರತಿ ಬದ್ದಿ ಸೇರಿದಂತೆ ಗ್ರಾಮದ ಸಮಸ್ತ ಗುರು ಹಿರಿಯರು ಪಕ್ಷದ ಕಾರ್ಯಕ ರ್ತರು ಮಹಿಳೆಯರು ಸೇರಿದಂತೆ ಹಲವರು ಈ ಒಂದು ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದರೊಂದಿಗೆ ಕ್ಷೇತ್ರದಲ್ಲಿನ ಕಲಕೇರಿ ಗ್ರಾಮದಲ್ಲಿ ಕುಕ್ಕರ್ ವಿತರಣೆ ಯಶಶ್ವಿಯಾಗಿ ನಡೆಯಿತು.

ಸುದ್ದಿ ಸಂತೆ ನ್ಯೂಸ್ ಕಲಘಟಗಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.