ನಿಧಿ ಹುಟುಕಾಟದಲ್ಲಿ ಜನರಿಗೆ ಪಂಗನಾಮ ಹಾಕುತ್ತಿದ್ದ ಇಬ್ಬರ ಬಂಧನ – ಅಯಟ್ಟಿ ಗ್ರಾಮಸ್ಥರ ಮಾಹಿತಿ ನವಲಗುಂದ ಪೊಲೀಸರ ಕಾರ್ಯಾಚರಣೆ…..

Suddi Sante Desk
ನಿಧಿ ಹುಟುಕಾಟದಲ್ಲಿ ಜನರಿಗೆ ಪಂಗನಾಮ ಹಾಕುತ್ತಿದ್ದ ಇಬ್ಬರ ಬಂಧನ – ಅಯಟ್ಟಿ ಗ್ರಾಮಸ್ಥರ ಮಾಹಿತಿ ನವಲಗುಂದ ಪೊಲೀಸರ ಕಾರ್ಯಾಚರಣೆ…..

ಧಾರವಾಡ

ನಿಧಿ‌ ಹುಡುಕಾಟದ ನೆಪ‌ ಮಾಡಿ ಮೋಸ‌‌ ಮಾಡುತಿದ್ದ‌ ಇಬ್ಬರನ್ನು ಬಂಧನ ಮಾಡಿರುವ ಘಟನೆ ನವಲಗುಂದ ದಲ್ಲಿ ಬೆಳಕಿಗೆ ಬಂದಿದೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಆಯಟ್ಟಿ ಗ್ರಾಮಕ್ಕೆ ಬಂದಿದ್ದರು ಇಬ್ಬರು.ಇಬ್ಬರು ಬಂದಿರುವ ವಿಚಾರ ತಿಳಿದ ಗ್ರಾಮಸ್ಥರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು ಸ್ಥಳಕ್ಕೆ ಆಗಮಿ ಸಿದ ಪೊಲೀಸರು ವಿಚಾರಣೆ ನಡೆಸಿ ಇಬ್ಬರನ್ನು ಹೆಡೆಮುರಿ ಕಟ್ಟಿದ ನವಲಗುಂದ ಪೊಲೀಸರು ಬಂಧನ ಮಾಡಿದ್ದಾರೆ.

ನಿಧಿ ಇದೆ ಎಂದು ಪೂಜೆ ಮಾಡಿಸುವ ನೆಪದಲ್ಲಿ ಮೋಸ ಮಾಡುತಿದ್ದ‌ ಇಬ್ಬರು ಖದೀಮರು. ಧಾರವಾಡ‌‌ ನುಗ್ಗಿಕೇರಿಯ ಮಾರುತಿ ಹಾಗೂ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ನಾಗಯ್ಯ ಬಂಧಿತರಾಗಿದ್ದಾರೆ.ಮಧ್ಯಮ ವರ್ಗದ ಜನರಿಗೆ ಟಾರ್ಗೆಟ್ ಮಾಡುತಿದ್ದರು ಇಬ್ಬರು.ಮನೆಯಲ್ಲಿ ನಿಧಿ ಇದೆ ಪೂಜೆ ಮಾಡಿಸಬೇಕು ಎಂದು ಹಣ‌ ಪಡೆದು ಮೋಸ ಮಾಡುತ್ತಿದ್ದರಂತೆ ಈ ಇಬ್ಬರು.

ಇಬ್ಬರನ್ನು ಬಂಧಿಸಿರುವ ನವಲಗುಂದ ಪೊಲೀಸರು ಈ ಹಿಂದೆ ಹೀಗೆ ಯಾವ ಯಾವ ಗ್ರಾಮದಲ್ಲಿ ಮಾಡಿದ್ದಾರೆ ಎಷ್ಟು ಹಣವನ್ನು ಪಡೆದು ಜನರಿಗೆ ಪಂಗನಾಮ ಹಾಕಿದ್ದಾರೆ ಹೀಗೆ ಎಲ್ಲಾ ವಿಚಾರ ಗಳ ಕುರಿತು ಪೊಲೀಸರು ಆರೋಪಿಗಳ ವಿಚಾರಣೆಯನ್ನು ಮಾಡತಾ ಇದ್ದಾರೆ

ಸುದ್ದ ಸಂತೆ ನ್ಯೂಸ್ ನವಲಗುಂದ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.