ಮಗುವಿನೊಂದಿಗೆ ಭಿಕ್ಷೆ ಎತ್ತುತ್ತಿದ್ದ ಮಹಿಳೆಗೆ ನೆರವಾದ ಸಂತೋಷ ಲಾಡ್ – ಅನಾಥ ರಕ್ಷಕ ನಾದ ಸಚಿವರ ಕಾರ್ಯಕ್ಕೆ ಕಂಡು ಬರುತ್ತಿದೆ ಮೆಚ್ಚುಗೆಯ ಮಹಾಪೂರ…..

Suddi Sante Desk
ಮಗುವಿನೊಂದಿಗೆ ಭಿಕ್ಷೆ ಎತ್ತುತ್ತಿದ್ದ ಮಹಿಳೆಗೆ ನೆರವಾದ ಸಂತೋಷ ಲಾಡ್ – ಅನಾಥ ರಕ್ಷಕ ನಾದ ಸಚಿವರ ಕಾರ್ಯಕ್ಕೆ ಕಂಡು ಬರುತ್ತಿದೆ ಮೆಚ್ಚುಗೆಯ ಮಹಾಪೂರ…..

ಧಾರವಾಡ

ಮಗುವಿನೊಂದಿಗೆ ಭಿಕ್ಷೆ ಎತ್ತುತ್ತಿದ್ದ ಮಹಿಳೆಗೆ ಕಾರ್ಮಿಕ ಸಚಿವ ಸಂತೋಷ ಲಾಡ್ ನೆರವಿನ ಸಹಾಯ ಹಸ್ತ ವನ್ನು ಚಾಚಿದ್ದಾರೆ ಹೌದು ನೆರವಿನ ಭರವಸೆ ನೀಡಿ, ಬದುಕಿನ ಪಾಠ ಹೇಳಿದ್ದಾರೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌*

ಮಗುವಿನೊಂದಿಗೆ ಬೀದಿಯಲ್ಲಿ ಭಿಕ್ಷೆ ಬೇಡುವುದ. ಕ್ಕಿಂತ ಮನೆಗಳಿಗೆ ಹೋಗಿ ಕೆಲಸ ಮಾಡಬಹು ದಲ್ವಾ. ಯಾವ ಮನೆಗೆ ಹೋಗುತ್ತಿಯೋ ಅಲ್ಲೇ ಮಗುವನ್ನು ಬಿಟ್ಟು ನೀನು ಕೆಲಸ ಮಾಡಬಹುದು. ನಾನು ನಿನಗೆ ಸಹಾಯ ಮಾಡುತ್ತೇನೆ. ಆದರೆ ಕೆಲಸ ಸಿಕ್ಕರೆ ಒಳ್ಳೆಯದಾಗುತ್ತೆ.ಹೀಗೆಂದು ಹೊಟ್ಟೆ ಹೊರೆಯಲು ಪುಟ್ಟ ಮಗುವನ್ನು ಬಟ್ಟೆಯಲ್ಲಿ ಸೊಂಟಕ್ಕೆ ಕಟ್ಟಿಕೊಂಡು ಭಿಕ್ಷೆ ಬೇಡುತ್ತಿದ್ದ ಮಹಿಳೆಗೆ ತಿಳಿ ಹೇಳಿ ಪುನರ್ವಸತಿಗೆ ಸಹಾಯ ಮಾಡಿದ್ದಾರೆ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌.

https://youtu.be/b-xgHHhVHTo?si=_UiL5p79yXI3TTjm

ಜಿಲ್ಲಾ ಪ್ರವಾಸ ಕೈಗೊಂಡಿದ್ದ ಅವರು ಧಾರವಾಡ ದಲ್ಲಿ ಭಿಕ್ಷೆ ಬೇಡುತ್ತಿದ್ದ ಮಹಿಳೆಯನ್ನು ಗಮನಿಸಿ ದರು ಕೂಡಲೇ ಆಕೆಗೆ ಈ ರೀತಿ ಭಿಕ್ಷೆ ಬೇಡುವುದು ಸರಿಯಲ್ಲ.ಮನೆ ಕೆಲಸವನ್ನಾದರೂ ಮಾಡು ಎಂದು ಬುದ್ದಿ ಹೇಳಿದರು.ನಿನ್ನ ಸಮಸ್ಯೆ ನನಗೆ ಅರ್ಥ ಆಗುತ್ತೆ. ನಾನು ಈಗ ಸಹಾಯ ಮಾಡಬ ಹುದು ಆದರೂ ಕೆಲಸ ಅಂತ ಒಂದಿದ್ದರೆ ಒಳ್ಳೆ ಯದು ಎಂದುʼ ಹೋಟೆಲ್‌ಗೆ ಕರೆದೊಯ್ದು ಚಹಾ ಕುಡಿಸಿ ಮಾನವೀಯತೆ ಮರೆದರು.

ʼಭಿಕ್ಷಾಟನೆಯಲ್ಲಿ ತೊಡಗಿರುವ ಈ ಮಹಿಳೆಯ ಬಗ್ಗೆ ಹಲವು ಬಾರಿ ಸಮಾಜ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದರೂ ಯಾರೂ ಗಮನ ಹರಿಸಿಲ್ಲ ಎಂದು ಸಂಶೋಧನಾ ವಿದ್ಯಾರ್ಥಿಯೊಬ್ಬರು ಸಚಿವರ ಗಮನಕ್ಕೆ ತಂದರುʼ ಆಗ “ಇನ್ನು ಮುಂದೆ ನನಗೆ ಮಾಹಿತಿ ನೀಡಿ” ಎಂದು ಖುದ್ದು ಸಚಿವರೇ ತಮ್ಮ ಮೊಬೈಲ್‌ ನಂಬರ್‌ ನೀಡಿದರು.

https://youtu.be/b-xgHHhVHTo?si=_UiL5p79yXI3TTjm

“ಸರ್ಕಾರ ಗೃಹಲಕ್ಷ್ಮಿ ಯೋಜನೆಯಡಿ ಎರಡು ಸಾವಿರ ಕೊಡುತ್ತಿದೆ. ಅದು ಬರುತ್ತಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ ಅರ್ಜಿ ಹಾಕಿದ್ದೇನೆ. ಆದರೂ ಹಣ ಬಂದಿಲ್ಲ ಎಂದು ಮಹಿಳೆ ಹೇಳಿದರು. ಆಗ ಕೂಡಲೇ ಸಂಬಂಧಿಸಿದವರ ಗಮನಕ್ಕೆ ತಂದು ವ್ಯವಸ್ಥೆ ಮಾಡುತ್ತೇನೆ.ಎಲ್ಲಾ ಸೌಲಭ್ಯ ಕೊಡಿಸು ತ್ತೇನೆ ನಾನಿರುವಾಗ ಯಾಕೆ ಹೆದರುತ್ತೀಯಾ ಎಂದು ಧೈರ್ಯ ತುಂಬಿದರು.ಸಂತೋಷ್‌ ಲಾಡ್‌ ಅವರ ಈ ನಡೆಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.