ಧಾರವಾಡ –
ಧಾರವಾಡದ ಬಾವಿಯೊಂದರಲ್ಲಿ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ.ಹೌದು ಕೊಳೆತ ಸ್ಥಿತಿಯಲ್ಲಿ ಈ ಒಂದು ಶವ ಪತ್ತೆಯಾಗಿದ್ದು ಸಂಗಮ ಸರ್ಕಲ್ ಬಳಿ ಇರುವ ಬಾವಿಯ ಲ್ಲಿ ಇದು ಸಿಕ್ಕಿದೆ.
ಕೆಲವು ದಿನಗಳಿಂದ ಬಾವಿಯಲ್ಲಿದ್ದ ಅಪರಿಚಿತ ಶವ ಕೊಳೆತ ಹಿನ್ನೆಲೆಯಲ್ಲಿ ದುರ್ವಾಸನೆಯಿಂದಾಗಿ ಬಾವಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.ಸದ್ಯ ಸ್ಥಳಕ್ಕೆ ಶಹರ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.