This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

Local News

ಕೈ ಪಕ್ಷದ ಭಾರ ಇಳಿಸಿ ಬಿಜೆಪಿ ಪಕ್ಷದ ಭಾರ ಹೊತ್ತುಕೊಂಡ ನೂರಾರು ಜನರು – ಶಾಸಕ ಅಮೃತ ದೇಸಾಯಿ ಅಭಿವೃದ್ಧಿ ಗೆ ಪಕ್ಷ ಸೇರ್ಪಡೆಗೊಂಡ ಕಾಂಗ್ರೆಸ್ ಪಕ್ಷದ ನೂರಾರು ಜನರು…..

WhatsApp Group Join Now
Telegram Group Join Now

ಧಾರವಾಡ –

ಬಿಜೆಪಿ ಜನ ಸಾಮಾನ್ಯರ ಪರವಾದ ಪಕ್ಷ: ಶಾಸಕ‌ ಅಮೃತ‌ ದೇಸಾಯಿ ಅಭಿಮತ ದೇಶದ ಅಭಿವೃದ್ಧಿ, ರಾಷ್ಟ್ರದ ಏಕತೆ ಹಾಗೂ ಹಿಂದೂ ಧರ್ಮಕ್ಕಾಗಿ ಹಗಲಿರುಳು ಶ್ರಮಿಸುತ್ತಿ ರುವ ಪ್ರಧಾನಿ ನರೇಂದ್ರ ಮೋದಿಯವರು ಪ್ರಶ್ನಾತೀತ ನಾಯಕರಾಗಿದ್ದಾರೆ.ಬರುವ ದಿನಗಳಲ್ಲಿ ಭಾರತವನ್ನು ವಿಶ್ವದ ನಾಯಕನಾಗಿಸುವುದು ಶತಸಿದ್ದ ಎಂದು ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕರಾದ ಅಮೃತ ದೇಸಾಯಿಯವರು ಹೇಳಿದರು.


ಧಾರವಾಡ ತಾಲೂಕಿನ ತೇಗೂರು ಗ್ರಾಮದಲ್ಲಿ ಗುರುವಾರ ನಡೆದ 10 ಗ್ರಾಮದ ಪ್ರಮುಖರ ಹಾಗೂ ಅವರ ಬೆಂಬಲಿ ಗರ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜಮ್ಮ- ಕಾಶ್ಮೀರ ಸೇರಿದಂತೆ ದೇಶದಲ್ಲಿ ನಡೆಯುತ್ತಿದ್ದ ಭಯೋತ್ಪಾದನಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ಸೆದೆ ಬಡೆಯುವ ಮೂಲಕ,ಅವು ಮತ್ತೊಮ್ಮೆ ಭಾರತದ ತಂಟೆಗೆ ಬರದಂತೆ ತಕ್ಕ ಪಾಠ ಕಲಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ.ಪ್ರಧಾನಿಯವರ ಪರಿಶ್ರಮದಿಂದ ಜಮ್ಮು ಕಾಶ್ಮೀರದಲ್ಲಿ ಕೇಂದ್ರೀಯ ಕಾನೂನುಗಳು ಅನ್ವಯವಾಗು ವಂತಾಗಿ,ಅಲ್ಲಿ ಶಾತಿ ನೆಲೆಸುವಂತಾಗಿದೆ ಎಂದು ತಿಳಿಸಿ ದರು.ಚುನಾವಣೆಯಲ್ಲಿ ಪ್ರಧಾನಿ ಮೋದಿಯವರು ಕೊಟ್ಟ ಮಾತಿನಂತೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಮಾಡುತ್ತಿದ್ದಾರೆ.ತ್ರಿವಳಿ ತಲಾಕ್ ನಿಷೇಧ ಹಾಗೂ ದೇಶದಲ್ಲಿ ಮತಾಂತರ ನಿಷೇದ ಕಾಯಿದೆ ಜಾರಿಗೆ ತರುವ ಮೂಲಕ ಹಿಂದುಗಳ ರಕ್ಷಣೆಗೆ ನಿಂತ ಮಹಾನ್ ನಾಯಕರಾಗಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸುವ ನಿಟ್ಟಿನಲ್ಲಿ ಅವರ ಜನಪರ ಯೋಜನೆ ಮತ್ತು ಮಹತ್ವದ ನಿರ್ಣಯಗಳನ್ನು ದೇಶದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿ ಸೋಣ ಎಂದರು.ಬಿಜೆಪಿ ಸಾಮಾನ್ಯರ ಪಕ್ಷ ಕಾಂಗ್ರೆಸ್ ಪಕ್ಷದಲ್ಲಿ ಸೋನಿಯಾ ಗಾಂಧಿ ಕುಟುಂಬದ ರಾಜಕಾರ ಣವೇ ಪ್ರದಾನವಾಗಿದೆ.ಅಲ್ಲಿ ಡಿಕೆಶಿ,ಸಿದ್ಧರಾಮಯ್ಯ ಹಾಗೂ ಇತರ ನಾಯಕರ ಮಾತಿಗೆ ಯಾವುದೇ ಬೆಲೆ ಇಲ್ಲ. ಆದರೆ ಬಿಜೆಪಿ ಸಾಮಾನ್ಯ ಹಾಗೂ ನಿಷ್ಠಾವಂತ ಕಾರ್ಯ ಕರ್ತರ ಪಕ್ಷವಾಗಿದ್ದು, ಇಲ್ಲಿನ ಪ್ರತಿಯೊಬ್ಬ ಕಾರ್ಯಕರ್ತನು ನಾಯಕನಿದ್ದಂತೆ. ಇಲ್ಲಿ ಯಾವುದೇ ಮೇಲು-ಕೀಳು ಎಂಬ ಭಾವನೆ ಇಲ್ಲ ಎಂದ ಅವರು, ತಮ್ಮ ಗ್ರಾಮದಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ವಿವರಿಸಿದರು.ನಂತರ ಸ್ಥಳೀಯ ಮುಖಂಡರು ಮಾತನಾಡಿದರು.ಈ ಸಂದರ್ಭ ದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಬಸವರಾಜ್ ಕುಂದಗೋಳ ಮಠ,ಮಂಡಲ ಅಧ್ಯಕ್ಷರಾದ ರುದ್ರಪ್ಪ ಅರಿವಾಳ, ಅಶೋಕ್ ದೇಸಾಯಿ, ನಾಗಪ್ಪ ಗಾಣಿಗೇರ್, ಸಂತೋಷ್ ಗೌಡ ಪಾಟೀಲ್,ಮಹಾದೇವ ದಂಡಿನ್,ಮಹೇಶ್ ಎಲಿಗಾರ್,ಶಿವಾನಂದ್ ಗುಂಡಗೋವಿ, ವೈ ಡಿ ಪಾಟೀಲ್, ನಾಗನಗೌಡ ಪಾಟೀಲ್, ವೀರನಗೌಡ ಪಾಟೀಲ್, ಸಂಗಪ್ಪ ಗಾಮಕ್ಕನವರ್, ಸಿದ್ದಪ್ಪ ಬೆಳವಲದ, ಮಹದೇವಪ್ಪ ಗೋಕಾವಿ, ಬಸವರಾಜ್ ಬಾಗೋಡಿ, ಸುಭಾಷಗೌಡ ಪಾಟೀಲ್, ಮುದುಕಪ್ಪ ತಾಳನವರ್, ಭೀಮನಗೌಡ ಪಾಟೀಲ, ಮಹಾಂತೇಶ ಹವಾಲ್ದಾರ್, ಬಸನಗೌಡ ಪಾಟೀಲ್ ಪ್ರವೀಣ್ ಕಮ್ಮಾರ ಸೇರಿದಂತೆ ಅನೇಕ ಗಣ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.


ಗುರುವಾರ ತೇಗೂರ ಗ್ರಾಮದಲ್ಲಿ ನಡೆದ ಭಾರತೀಯ ಜನತಾ ಪಾರ್ಟಿಯ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಯಲ್ಲಪ್ಪ ಬಾಗೋಡಿ, ಕೇದಾರಪ್ಪ ಕಾಳಿಕೆದಾರಿ, ಬಸು ರತ್ನಪ್ಪನವರ್,ರುದ್ರಪ್ಪ ಮಾದನಬಾವಿ, ಮಾರುತಿ ಹಾದಿಮನಿ, ಶಿವಪ್ಪ ಗುಗೆನ್ನವರ, ಬಸವರಾಜ ಗೋಕಾವಿ, ರಮೇಶ್ ಬಾಗೋಡಿ, ಈರಪ್ಪ ಬಳಿಗಾರ್, ಶಿವಾನಂದ ತಿಮ್ಮಾಪುರ್, ಪ್ರವೀಣ್ ಪಟ್ಟಣಶೆಟ್ಟಿ, ಸದಾನಂದ ಗಳಗಿ, ಮಹಾದೇವಪ್ಪ ಬಾಗೋಡಿ, ಸುರೇಶ್ ಬಾಗೋಡಿ, ರುದ್ರಪ್ಪ ತಿಮ್ಮಾಪುರ್, ಮಹದೇವ ಹುಣಸಿಕಟ್ಟಿ, ಮಹಾಂತೇಶ್ ಪಟ್ಟಣಶೆಟ್ಟಿ, ಬಸವರಾಜ್ ನಾಗೋಜಿ ಸೇರಿದಂತೆ‌ ತಾಲೂ ಕಿನ ಹೊಸತೆಗೂರ, ಹಳೆ ತೆಗೂರು, ಬೋಗೂರ, ಪುಡಕ ಲಕಟ್ಟಿ, ಕುರುಬಗಟ್ಟಿ, ದುರ್ಗದಕೆರೆ, ಮದಿಕೊಪ್ಪ, ವೆಂಕಟಾ ಪುರ್,ಮುಗಳಿ, ಕೋಟೂರ್, ನೀರಲಕಟ್ಟಿ ಗ್ರಾಮಗಳಿಂದ ಪ್ರಮುಖರು ಹಾಗೂ ಅವರ ಸಂಗಡಿಗರು ಸೇರಿದಂತೆ ನೂರಾರು ಜನರು ಬಿಜೆಪಿ ಪಕ್ಷ ಸೇರ್ಪಡೆಗೊಂಡರು.ಈ ವೇಳೆ ಧಾರವಾಡದ ನೆಚ್ಚಿನ ಶಾಸಕರಾದ ಅಮೃತ ದೇಸಾಯಿಯವರ ಅಭಿವೃದ್ಧಿ ಕಾಮಗಾರಿಗಳನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದಾಗಿ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದರು.

ವರದಿ – ಆತ್ಮಾನಂದ ಸುದ್ದಿ ಸಂತೆ ಟೀಮ್


Google News

 

 

WhatsApp Group Join Now
Telegram Group Join Now
Suddi Sante Desk