This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ನನಗೆ ಟಿಕೆಟ್ ಸಿಗುವ ವಿಶ್ವಾಸ ಇದೆ ನಾಗರಾಜ್ ಛಬ್ಬಿ – ಕ್ಷೇತ್ರದಲ್ಲಿ ಬದಲಾವಣೆ ತರಬೇಕು ಎನ್ನುತ್ತಾ ಹಲವಾರು ವಿಚಾರಗಳ ಕುರಿತು ಮಾತು…..

WhatsApp Group Join Now
Telegram Group Join Now

ಅಳ್ನಾವರ –

ಕಲಘಟಗಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ ಹಂಚಿಕೆಯನ್ನು ಪಕ್ಷದ ಹೈಕಮಾಂಡ್‌ ಶೀಘ್ರ ಇತ್ಯರ್ಥ ಮಾಡಲಿದೆ.ಪಕ್ಷದ ನಿಷ್ಠಾವಂತ ಕಾರ್ಯಕರ್ತನಾದ ನನಗೆ ಟಿಕೆಟ್ ಸಿಗುವ ವಿಶ್ವಾಸ ಇದೆ ಎಂದು ಮಾಜಿ ಶಾಸಕ ನಾಗರಾಜ ಛಬ್ಬಿ ಹೇಳಿದರು.ಅಳ್ನಾವರ ದಲ್ಲಿ ಮಾತನಾ ಡಿದ ಅವರು ಕಾಂಗ್ರೆಸ್ ಮುಖಂಡ ಸಂತೋಷ್ ಲಾಡ್ ಈಚೆಗೆ ಟಿಕೆಟ್‌ ನನಗೇ ಸಿಗಲಿದೆ ಎಂದು ಹೇಳಿಕೆ ನೀಡಿದ್ದ ಬೆನ್ನಲ್ಲೇ ನಾಗರಾಜ ಛಬ್ಬಿ ಸುದ್ದಿಗೋಷ್ಠಿ ನಡೆಸಿ ಕೆಲವು ವಿಚಾರ ಗಳ ಕುರಿತು ಮಾತನಾಡಿದರು.

ನಾನು ಕಡಿಮೆ ಮಾತನಾಡುವ ವ್ಯಕ್ತಿಯಾಗಿದ್ದು ಜನರ ಮೂಗಿಗೆ ತುಪ್ಪ ಹಚ್ಚುವ ಕೆಲಸ ನನ್ನಿಂದ ಆಗದು ಸ್ಟೈಲ್ ಡ್ರಾಮ ಮಾಡುವ ಜಾಯಮಾನ ನನ್ನದಲ್ಲ ಕಲಘಟಗಿ ಕ್ಷೇತ್ರದಲ್ಲಿ ಸಮಗ್ರ ಬದಲಾವಣೆ ತರಬೇಕು ಎಂಬ ಹಂಬಲ ನನ್ನದು ಎಂದರು.ಕಲಘಟಗಿ ಕ್ಷೇತ್ರದ ಜನರು ಮುಗ್ಧರು, ಬಡವರು. ಈ ಬಾರಿ ಕ್ಷೇತ್ರದ ಜನ ಬದಲಾವಣೆ ಬಯಸಿ ದ್ದಾರೆ.ಒಳ್ಳೆಯ ವ್ಯಕ್ತಿ ಇಲ್ಲಿ ಶಾಸಕರಾಗಿ ಆಯ್ಕೆಯಾಗದು ಖಚಿತ.ಈ ಭಾಗದ ನೀರಾವರಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನೀಡೊದು ಅವಶ್ಯವಿದೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ.ಎಲ್ಲಡೆ ಕಾಂಗ್ರೆಸ್ ಪಕ್ಷದ ಪರ ಒಲವು ಹೆಚ್ಚಾಗಿದೆ ಎಂದರು.ಈ ಒಂದು ಸಂದರ್ಭದಲ್ಲಿ ಕಿರಣ ಪಾಟೀಲ ಕುಲಕರ್ಣಿ,ದಸಗೀರ ಹುಣಶಿಕಟ್ಟಿ,ಶಿವಶಂಕರ ಗೆನಪ್ಪನವರ,ಅಜೀಜ್ ದೇವರಾಯಿ,ಶಂಕರ ಮುಗಳಿ, ಈರಪ್ಪ ಬಳ್ಳಾರಿ,ಹನಮಂತ ಕಿತ್ತೂರ,ನಾಗಪ್ಪ ವಾಲಿಕರ, ಇಮಾಮ ಮುಕಾಸಿ ಸೇರಿದಂತೆ ಹಲವರು ಉಪಸ್ಥಿತರಿ ದ್ದರು.


Google News

 

 

WhatsApp Group Join Now
Telegram Group Join Now
Suddi Sante Desk