This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಶ್ರೀಗಂಧ ಮರಗಳ್ಳರ ಬಂಧನ – 5 ಲಕ್ಷ ರೂ. ಮೌಲ್ಯದ 70 ಕೆಜಿ ಶ್ರೀಗಂಧದ ತುಂಡು, ಚಕ್ಕೆಗಳು ವಶ

WhatsApp Group Join Now
Telegram Group Join Now

ಧಾರವಾಡ – ಶ್ರೀಗಂಧದ ಮರಗಳನ್ನು ಕಡಿದು ತುಂಡುಗಳನ್ನಾಗಿ ಮಾಡಿ ಮಾರಾಟ ಮಾಡುತ್ತಿದ್ದವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.ಹುಬ್ಬಳ್ಳಿ ದೇವರಗುಡಿಹಾಳದ ಮೆಹಬೂಬಸಾಬ ಸವಣೂರ (24), ಕಲಘಟಗಿ ತಾಲೂಕಿನ ಶೀಗಿಗಟ್ಟಿ ಗ್ರಾಮದ ಕೃಷ್ಣಪ್ಪ ಲಮಾಣಿ (48), ಹಳಿಯಾಳದ ಮುರ್ಕವಾಡದ ಅರ್ಜುನ ದೇವೆಂದ್ರ ಮಾಚಕ್ (48) ಬಂಧಿತರು. ಬಂಧಿತರಿಂದ 5 ಲಕ್ಷ ರೂ. ಮೌಲ್ಯದ ಸುಮಾರು 70 ಕೆಜಿ ಶ್ರೀಗಂಧದ ತುಂಡು, ಚಕ್ಕೆಗಳು ಹಾಗೂ 1 ತಕ್ಕಡಿ, ತೂಕದ ಕಲ್ಲುಗಳು, 2 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.


ಸತ್ತೂರಿನ ಸಂಜೀವಿನಿ ಪಾರ್ಕ್ ಹಾಗೂ ಶಹರ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಶ್ರೀಗಂಧದ ಮರಗಳನ್ನು ಕಡಿದು ತುಂಡುಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡುವ ಸಮಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.


ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕೆಂಚಪ್ಪನವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಆರ್.ಎಸ್. ಉಪ್ಪಾರ, ಸಿಬ್ಬಂದಿ ಎಂ.ಎಂ. ತಲ್ಲೂರ, ಯಲ್ಲಾನಾಯಕ ಹಮಾಣಿ, ಶಿವಾನಂದ ಕಡಹಟ್ಟಿ, ರಘು ಕುರಿಯವರ, ವಿಠ್ಠಲ ಜೋನಿ, ಅವಿನಾಶ ರಣಕಾಂಬೆ, ಚಾಂದಬಾಷಾ ಮುಲ್ಲಾ ತಂಡ ದಾಳಿ ನಡೆಸಿದೆ.


Google News

 

 

WhatsApp Group Join Now
Telegram Group Join Now
Suddi Sante Desk