ಹುಬ್ಬಳ್ಳಿ –
ಪೂಣೆ ಬೆಂಗಳೂರು ರಸ್ತೆಯಲ್ಲಿ ಭೀಕರ ಕಾರು ಅಪಘಾತ ಸಂಭವಿಸಿದ್ದು ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತರಾಗಿದ್ದಾರೆ.ಹೌದು ಒಂದೇ ಕುಟುಂಬದ ಮೂವರ ಸಾವು, ಓರ್ವ ಮಹಿಳೆಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ
ಹುಬ್ಬಳ್ಳಿ ಸಮೀಪ ಜಿಗಳೂರ ಗ್ರಾಮದ ಬಳಿ ಕಾರು ಅಪಘಾತವಾಗಿದೆ.ಚಾಲಕನ ನಿರ್ಲಕ್ಷ್ಯ ದಿಂದ ದರ್ಗಾಗೆ ಗುದ್ದಿದೆ ಕಾರು.ಬೆಂಗಳೂರಿನಿಂದ ಹುಬ್ಬಳ್ಳಿಗೆ ಬರುತ್ತಿತ್ತು ಈ ಒಂದು ಕಾರು.ಬೆಂಗಳೂರಿನಲ್ಲಿ ಗೃಹ ಪ್ರವೇಶ ಮುಗಿಸಿ ಹುಬ್ಬಳ್ಳಿಗೆ ವಾಪಸ್ಸಾಗುತ್ತಿತ್ತು ಕುಟುಂಬದವರು.
ಅಪಘಾತದಲ್ಲಿ ಪತಿ,ಪತ್ನಿ ಅಳಿಯ ಸ್ಥಳದಲ್ಲಿಯೇ ಸಾವಿ ಗೀಡಾಗಿದ್ದು ಇನ್ನೂ ಹನಮಂತಪ್ಪ ಬೇವಿನಕಟ್ಟಿ,ಪತ್ನಿ ರೇಣುಕಾ ಬೇವಿನಕಟ್ಟಿ,ಅಳಿಯ ರವೀಂದ್ರ ಸಾವಿಗೀಡಾ ಗಿದ್ದು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮಗಳನ್ನು ಕೈಗೊಂಡಿದ್ದಾರೆ.