This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಬೆಳ್ಳಂ ಬೆಳಿಗ್ಗೆ ವಾರ್ಡ್ 50 ರಲ್ಲಿ ಅಬ್ಬರದ ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ – ವಾರ್ಡ್ ನಲ್ಲಿ ಜೋರಾಗಿದೆ ಭಾಗಿರತಿ ಚಂದ್ರಪ್ಪ ಮುಶಪ್ಪನವರ ಅಲೆ…..

WhatsApp Group Join Now
Telegram Group Join Now

ಧಾರವಾಡ –

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಾಳೆ ಸಂಜೆ ತೆರೆ ಬೀಳಲಿದ್ದು ಇನ್ನೂ ವಾರ್ಡ್ 50 ರಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮತಿ ಭಾಗೀರತಿ ಚಂದ್ರಪ್ಪ ಮುಶಪ್ಪ ನವರ ಇಂದು ಕೂಡಾ ಅಬ್ಬರದ ಪ್ರಚಾರವನ್ನು ಮಾಡಿದರು.

ಬೆಳ್ಳಂ ಬೆಳಿಗ್ಗೆ ವಾರ್ಡ್ ನಲ್ಲಿ ಇಂದು ಕೂಡಾ ಪ್ರಚಾರ ವನ್ನು ಮಾಡಿ ಮತಯಾಚನೆ ಮಾಡಿದರು.ಬಿಜೆಪಿ ಪಕ್ಷದ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಸೇರಿದಂತೆ ಹಲವರೊಂದಿಗೆ ಮನೆ ಮನೆಗೆ ತೆರಳಿ ಅಬ್ಬರದ ಪ್ರಚಾರವನ್ನು ಮಾಡಿದರು.

ಮೂರನೇ ಸುತ್ತು ವಾರ್ಡ್ ನಲ್ಲಿ ಪಕ್ಷದ ಕಾರ್ಯ ಕರ್ತರು ಮುಖಂಡರು ಆಪ್ತರೊಂದಿಗೆ ತೆರಳಿದ ಇವರು ಮತ್ತೊಂದು ಸುತ್ತು ಹಾಕಿ ಪ್ರಚಾರವನ್ನು ಮಾಡಿ ಮತಯಾಚನೆ ಮಾಡಿದರು.

ಈಗಾಗಲೇ ವಾರ್ಡ್ ನಲ್ಲಿ ಇವರ ಪರವಾಗಿ ಅಲೆ ಸ್ಪಂದನೆ ಹೆಚ್ಚಾಗಿ ಕಂಡು ಬರುತ್ತಿದ್ದು ಇವರ ಪರ ಗೆಲುವಿನ ಅಲೆ ಕಂಡು ಸಧ್ಯ ಕಂಡು ಬರುತ್ತಿದೆ. ವಾರ್ಡ್ ನಲ್ಲಿ ಈಗಾಗಲೇ ಬಿಜೆಪಿ ಪರವಾದ ಗಾಳಿ ಬೀಸುತ್ತಿದ್ದು ಇದರ ನಡುವೆ ಇವರು ಕೂಡಾ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.

ಮನೆ ಮನೆಗೆ ತೆರಳಿ ಅಬ್ಬರದ ಮತಯಾಚನೆಯನ್ನು ಮಾಡುತ್ತಿದ್ದಾರೆ.ಹೊದಲೆಲ್ಲ ಇವರ ಪರವಾಗಿ ಸಾಕಷ್ಟು ಬೆಂಬಲ ಗೆಲುವಿನ ಮಾತುಗಳು ವಾರ್ಡಗ ನಲ್ಲಿ ಕಂಡು ಕೇಳಿ ಬರುತ್ತಿವೆ.

ಹೌದು ಈ ಹಿಂದೆ ಪಕ್ಷದಲ್ಲಿದ್ದುಕೊಂಡು ಅಧಿಕಾರ ದಲ್ಲಿ ಇರದಿದ್ದರೂ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಕೆಲಸ ಕಾರ್ಯಗಳನ್ನು ಮಾಡಿದ ಇವರಿಗೆ ವಾರ್ಡ್ ನಲ್ಲಿ ಮತದಾರರು ಉತ್ತಮವಾದ ಸ್ಪಂದನೆ ನೀಡಿದ್ದಾರೆ.

ಯಾವುದೇ ಅಧಿಕಾರದಲ್ಲಿ ಇಲ್ಲದಿದ್ದರೂ ಕೂಡಾ ಈ ಹಿಂದೆ ಕ್ಷೇತ್ರದಲ್ಲಿ ಶಾಸಕರು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರೊಂದಿಗೆ ಮತ್ತು ಸಂಸದರು ಕೇಂದ್ರದ ಸಚಿವರಾಗಿರುವ ಪ್ರಹ್ಲಾದ್ ಜೋಶಿ ಅವ ರೊಂದಿಗೆ ಸಾಕಷ್ಟು ಪ್ರಮಾಣದಲ್ಲಿ ಅನುದಾನವನ್ನು ತಗೆದುಕೊಂಡು ಬಂದು ಅಭಿವೃದ್ದಿಯನ್ನು ಮಾಡಿ ರುವ ಇವರು ಈಗ ವಾರ್ಡ್ ನ ಜನತೆಯ ಸೇವೆಗೆ ಮುಂದಾಗಿದ್ದಾರೆ.

ಹೀಗಾಗಿ ಸಧ್ಯ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಯನ್ನು ಮಾಡಿರುವ ಶ್ರೀಮತಿ ಭಾಗೀರತಿ ಚಂದ್ರಪ್ಪ ಮುಶಪ್ಪನವರ ಅವರು ಅಖಾಡಕ್ಕೆ ಇಳಿದಾಗಿನಿಂದ ಸಂತಸಗೊಂಡಿರುವ ವಾರ್ಡ್ ನ ಜನರು ಮತದಾ ರರು ಈಗ ಇವರ ಧ್ವನಿಯಾಗಿ ನಿಂತುಕೊಂಡಿದ್ದಾರೆ.

ನಾಮಪತ್ರ ಸಲ್ಲಿಸಿ ಪ್ರಚಾರ ಕೈಗೊಂಡ ಇವರಿಗೆ ಆರಂಭದಿಂದಲೂ ಗೆಲುವಿನ ಮಾತುಗಳನ್ನು ಹೇಳುತ್ತಿರುವ ಮತದಾರರು ಬದಲಾವಣೆ ಬಯಸಿ ದ್ದೇವೆ ಅದು ನಿಮ್ಮಿಂದಾಗಲಿ ಎನ್ನುತ್ತಿದ್ದು ಎಲ್ಲೇಡೆ ಇವರ ಪರವಾದ ಅಲೆ ಕಂಡು ಬರುತ್ತಿದೆ.

ಹೀಗಾಗಿ ವಾರ್ಡ್ ನಲ್ಲಿ ಸಧ್ಯ ಬಿಜೆಪಿ ಪರ ಅಲೆ ಜೋರಾಗಿ ಕೇಳಿ ಬರುತ್ತಿದ್ದು ಹೊಸ ಕನಸು ಹೊಸ ಅಭಿವೃದ್ದಿಯ ಯೋಜನೆಗಳೊಂದಿಗೆ ಸ್ಪರ್ಧೆ ಮಾಡಿ ರುವ ಇವರಿಗೆ ವಾರ್ಡ್ ನಲ್ಲಿ ಮತದಾರರು ಜೈ ಜೈ ಎನ್ನುತ್ತಿದ್ದು ಈ ಬಾರಿ ವಾರ್ಡ್ ನಲ್ಲಿ ನಿಮ್ಮದೇ ಗೆಲುವು ನಿವೇ ನಮಗೆ ಬಾಸ್ ಎನ್ನುತ್ತಾ ಗೆಲುವಿನ ಮಾತುಗಳನ್ನು ಹೇಳಿ ಆಶೀರ್ವಾದವನ್ನು ಮಾಡುತ್ತಿದ್ದಾರೆ.

ಹೀಗಾಗಿ ವಾರ್ಡ್ ನಲ್ಲಿ ಭಾಗೀರತಿ ಚಂದ್ರಪ್ಪ ಮುಶಪ್ಪನವರ ಅವರು ಅಬ್ಬರದ ಪ್ರಚಾರವನ್ನು ಮಾಡುತ್ತಿದ್ದಾರೆ.ಬಿಡುವಿಲ್ಲದೇ ಅಬ್ಬರದ ಪ್ರಚಾರ ವನ್ನು ಮಾಡುತ್ತಿದ್ದು.

ಕೇಂದ್ರದಲ್ಲಿ ನಮ್ಮದೇ ಸರ್ಕಾರ ರಾಜ್ಯದಲ್ಲಿ ನಮ್ಮ ಸರ್ಕಾರ ಹೀಗಾಗಿ ಪಾಲಿಕೆಯಲ್ಲೂ ನಾವೇ ಅಧಿಕಾ ರಕ್ಕೆ ಬಂದರೆ ಅನುಕೂಲವಾಗುತ್ತದೆ ಎಂದುಕೊಂ ಡಿರುವ ಇವರು ಮತದಾರರಲ್ಲಿ ಅಭಿವೃದ್ದಿಯ ಕೆಲಸ ಕಾರ್ಯಗಳೊಂದಿಗೆ ಬಿಡುವಿಲ್ಲದೇ ಮತಯಾಚನೆ ಯಲ್ಲಿ ತೊಡಗಿದ್ದಾರೆ.

ಇನ್ನೂ ವಾರ್ಡ್ ನಲ್ಲಿ ಹಲವೆಡೆ ಅಬ್ಬರದ ಪ್ರಚಾರ ವನ್ನು ಮಾಡುತ್ತಿದ್ದು ನೂರಾರು ಸಂಖ್ಯೆಯ ಯುವಕ ರು ಭಾಗವಹಿಸಿ ಮತಯಾಚನೆ ಮಾಡಿದರು.


Google News

 

 

WhatsApp Group Join Now
Telegram Group Join Now
Suddi Sante Desk