This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

Local News

ಬೆಳ್ಳಂ ಬೆಳಿಗ್ಗೆ ವಾರ್ಡ್ 61 ರಲ್ಲಿ ಅಬ್ಬರದ ಪ್ರಚಾರದಲ್ಲಿ JDS ಅಭ್ಯರ್ಥಿ – ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿ ಗಳ ನಡುವೆ ಜೋರಾಗಿದೆ ಶ್ರೀಕಾಂತ ತೇಲಗಾರ ಅಲೆ…..

WhatsApp Group Join Now
Telegram Group Join Now

ಹುಬ್ಬಳ್ಳಿ –

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಾಳೆ ಸಂಜೆ ತೆರೆ ಬೀಳಲಿದ್ದು ಇನ್ನೂ ಹುಬ್ಬಳ್ಳಿಯ ವಾರ್ಡ್ 61 ರಲ್ಲಿ JDS ಅಭ್ಯರ್ಥಿ ಶ್ರೀಕಾಂತ ತೇಲಗಾರ ಇಂದು ಕೂಡಾ ಅಬ್ಬರದ ಪ್ರಚಾರವನ್ನು ಮಾಡಿದರು.

ಬೆಳ್ಳಂ ಬೆಳಿಗ್ಗೆ ವಾರ್ಡ್ ನಲ್ಲಿ ಇಂದು ಕೂಡಾ ಪ್ರಚಾರವನ್ನು ಮಾಡಿದರು.ಪಕ್ಷದ ಆಪ್ತರು ಬೆಂಬಲಿ ಗರು ಸೇರಿದಂತೆ ಹಲವರೊಂದಿಗೆ ಮನೆ ಮನೆಗೆ ತೆರಳಿ ಅಬ್ಬರದ ಪ್ರಚಾರವನ್ನು ಮಾಡಿದರು.

ಇಂದು ಮೂರನೇ ಸುತ್ತು ವಾರ್ಡ್ ನಲ್ಲಿ ಪಕ್ಷದ ಕಾರ್ಯಕರ್ತರು ಮುಖಂಡರು ಆಪ್ತರೊಂದಿಗೆ ತೆರಳಿದ ಇವರು ಮತ್ತೊಂದು ಸುತ್ತು ಹಾಕಿ ಪ್ರಚಾರವನ್ನು ಮಾಡಿ ಮತಯಾಚನೆ ಮಾಡಿದರು.

ಈಗಾಗಲೇ ವಾರ್ಡ್ ನಲ್ಲಿ ಇವರ ಪರವಾಗಿ ಅಲೆ ಸ್ಪಂದನೆ ಹೆಚ್ಚಾಗಿ ಕಂಡು ಬರುತ್ತಿದ್ದು ಇವರ ಪರ ಗೆಲುವಿನ ಅಲೆ ಕಂಡು ಸಧ್ಯ ಕಂಡು ಬರುತ್ತಿದೆ. ವಾರ್ಡ್ ನಲ್ಲಿ ಈಗಾಗಲೇ ರಾಷ್ಟ್ರೀಯ ಪಕ್ಷಗಳ ನಿರ್ಲಕ್ಷ್ಯ ದಿಂದ ಜನರು ಬೇಸತ್ತಿದ್ದು ಇವರ ಪರವಾದ ಗಾಳಿ ಬೀಸುತ್ತಿದೆ.

ಇದರ ನಡುವೆ ಇವರು ಕೂಡಾ ಅಬ್ಬರದ ಪ್ರಚಾರ ದಲ್ಲಿ ತೊಡಗಿದ್ದಾರೆ.ಮನೆ ಮನೆಗೆ ತೆರಳಿ ಅಬ್ಬರದ ಮತಯಾಚನೆಯನ್ನು ಮಾಡುತ್ತಿದ್ದಾರೆ.ಹೊದಲೆಲ್ಲ ಇವರ ಪರವಾಗಿ ಸಾಕಷ್ಟು ಪ್ರಮಾಣದಲ್ಲಿ ಸ್ಪಂದನೆ ಬೆಂಬಲ ಕಂಡು ಬರುತ್ತಿದೆ

ಹೌದು ಈ ಹಿಂದೆ ಪಕ್ಷದಲ್ಲಿದ್ದುಕೊಂಡು ಅಧಿಕಾರ ದಲ್ಲಿ ಇರದಿದ್ದರೂ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಕೆಲಸ ಕಾರ್ಯಗಳನ್ನು ಮಾಡಿದ ಇವರಿಗೆ ವಾರ್ಡ್ ನಲ್ಲಿ ಮತದಾರರು ಉತ್ತಮವಾದ ಸ್ಪಂದನೆ ನೀಡಿದ್ದಾರೆ.ಯಾವುದೇ ಅಧಿಕಾರದಲ್ಲಿ ಇಲ್ಲದಿದ್ದರೂ ಕೂಡಾ ಈ ಹಿಂದೆ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣ ದಲ್ಲಿ ಅಭಿವೃದ್ದಿಯನ್ನು ಮಾಡಿರುವ ಇವರು ಈಗ ವಾರ್ಡ್ ನ ಜನತೆಯ ಸೇವೆಗೆ ಮುಂದಾಗಿದ್ದಾರೆ.

ಹೀಗಾಗಿ ಸಧ್ಯ JDS ಅಭ್ಯರ್ಥಿಯಾಗಿ ಸ್ಪರ್ಧೆಯನ್ನು ಮಾಡಿರುವ ಶ್ರೀಕಾಂತ ತೇಲಗಾರ ಅವರು ಅಖಾಡಕ್ಕೆ ಇಳಿದಾಗಿನಿಂದ ಸಂತಸಗೊಂಡಿರುವ ವಾರ್ಡ್ ನ ಜನರು ಮತದಾರರು ಈಗ ಇವರ ಧ್ವನಿಯಾಗಿ ನಿಂತುಕೊಂಡಿದ್ದಾರೆ.

ನಾಮಪತ್ರ ಸಲ್ಲಿಸಿ ಪ್ರಚಾರ ಕೈಗೊಂಡ ಇವರಿಗೆ ಆರಂಭದಿಂದಲೂ ಗೆಲುವಿನ ಮಾತುಗಳನ್ನು ಹೇಳುತ್ತಿರುವ ಮತದಾರರು ಬದಲಾವಣೆ ಬಯಸಿ ದ್ದೇವೆ ಅದು ನಿಮ್ಮಿಂದಾಗಲಿ ಎನ್ನುತ್ತಿದ್ದು ಎಲ್ಲೇಡೆ ಇವರ ಪರವಾದ ಅಲೆ ಕಂಡು ಬರುತ್ತಿದೆ.

ಹೀಗಾಗಿ ವಾರ್ಡ್ ನಲ್ಲಿ ಸಧ್ಯ JDS ಪರ ಅಲೆ ಜೋರಾಗಿ ಕೇಳಿ ಬರುತ್ತಿದ್ದು ಹೊಸ ಕನಸು ಹೊಸ ಅಭಿವೃದ್ದಿಯ ಯೋಜನೆಗಳೊಂದಿಗೆ ಸ್ಪರ್ಧೆ ಮಾಡಿರುವ ಇವರಿಗೆ ವಾರ್ಡ್ ನಲ್ಲಿ ಮತದಾರರು ಜೈ ಜೈ ಎನ್ನುತ್ತಿದ್ದು ಈ ಬಾರಿ ವಾರ್ಡ್ ನಲ್ಲಿ ನಿಮ್ಮದೇ ಗೆಲುವು ನಿವೇ ನಮಗೆ ಬಾಸ್ ಎನ್ನುತ್ತಾ ಗೆಲುವಿನ ಮಾತುಗಳನ್ನು ಹೇಳಿ ಆಶೀರ್ವಾದವನ್ನು ಮಾಡುತ್ತಿ ದ್ದಾರೆ.

ಹೀಗಾಗಿ ವಾರ್ಡ್ ನಲ್ಲಿ ಶ್ರೀಕಾಂತ ತೇಲಗಾರ ಅವರು ಅಬ್ಬರದ ಪ್ರಚಾರವನ್ನು ಮಾಡುತ್ತಿದ್ದಾರೆ ಬಿಡುವಿ ಲ್ಲದೇ ಅಬ್ಬರದ ಪ್ರಚಾರವನ್ನು ಮಾಡುತ್ತಿದ್ದಾರೆ. ವಾರ್ಡ್ ಸಂಪೂರ್ಣವಾಗಿ ಅಭಿವೃದ್ಧಿಯಾಗದೇ ನಿರ್ಲಕ್ಷ್ಯಕ್ಕೊಳಗಾಗಿದ್ದು ಪಾಲಿಕೆಯಲ್ಲೂ ನಾವೇ ಅಧಿಕಾರಕ್ಕೆ ಬಂದರೆ ಅನುಕೂಲವಾಗುತ್ತದೆ ಎಂದು ಕೊಂಡಿರುವ ಇವರು ಮತದಾರರಲ್ಲಿ ಅಭಿವೃದ್ದಿಯ ಕೆಲಸ ಕಾರ್ಯಗಳೊಂದಿಗೆ ಬಿಡುವಿಲ್ಲದೇ ಮತ ಯಾಚನೆಯಲ್ಲಿ ತೊಡಗಿದ್ದಾರೆ.

ಇನ್ನೂ ವಾರ್ಡ್ ನಲ್ಲಿ ಹಲವೆಡೆ ಅಬ್ಬರದ ಪ್ರಚಾರ ವನ್ನು ಮಾಡುತ್ತಿದ್ದು ನೂರಾರು ಸಂಖ್ಯೆಯ ಯುವ ಕರು ಭಾಗವಹಿಸಿ ಮತಯಾಚನೆ ಮಾಡಿದರು.


Google News

 

 

WhatsApp Group Join Now
Telegram Group Join Now
Suddi Sante Desk