ಹುಬ್ಬಳ್ಳಿ –
JDS ಪಕ್ಷದ ಕಾರ್ಯಕಾರಣಿ ಸಭೆ ಹುಬ್ಬಳ್ಳಿಯಲ್ಲಿ ನಡೆಯಿತು.ನಗರದಲ್ಲಿ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ನೇತ್ರತ್ವದಲ್ಲಿ ನಡೆದ ಕಾರ್ಯ ಕಾರಣಿ ಸಭೆಯಲ್ಲಿ ವಾರ್ಡ್ ಮತ್ತು ಬೂತ್ ಮಟ್ಟದಿಂದ ಹಿಡಿದು ದೊಡ್ಡ ಪ್ರಮಾಣದಲ್ಲಿ ಪಕ್ಷವನ್ನು ಹೇಗೆ ಸಂಘಟನೆ ಮಾಡಬೇಕು
ಹಾಗೇ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷದವನ್ನು ಹೇಗೆ ಗಟ್ಟಿಗೊಳಿಸಬೇಕು ಎಂಬ ವಿಚಾರ ಕುರಿತಂತೆ ಚರ್ಚೆಯನ್ನು ಮಾಡಲಾಯಿತು.ಇದೇ ವೇಳೆ ಪೂರ್ಣಿಮಾ ಸವದತ್ತಿ ಯವರು ಮಾತನಾಡಿ ಕೆಲವೊಂದಿಷ್ಟು ಸಲಹೆ ಸೂಚನೆಗಳನ್ನು ನೀಡಿದರು.
ಇದರೊಂದಿಗೆ ಮುಂದಿನ ತಿಂಗಳು ಪಕ್ಷದಿಂದ ಪಂಚ ರಥ ಯಾತ್ರೆ ಆರಂಭವಾಗಲಿದ್ದು ಹೀಗಾಗಿ ಈ ಒಂದು ವಿಚಾರ ಕುರಿಂತತೆಯೂ ಕೂಡಾ ಈ ಒಂದು ಕಾರ್ಯಕಾರಣಿಯಲ್ಲಿ ಚರ್ಚೆಯನ್ನು ಮಾಡಲಾಯಿತು.
ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಅವರೊಂ ದಿಗೆ ಪಕ್ಷದ ರಾಜ್ಯ ಮಹಿಳಾ ಪ್ರಧಾನ ಕಾರ್ಯ ದರ್ಶಿ ಪೂರ್ಣಿಮಾ ಮ ಸವದತ್ತಿ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ್ ಹುಣಸಿನ ಮರದ ಹಾಗೂ ಪ್ರಮುಖ ಮುಖಂಡರು ಕಾರ್ಯಕಾರಣಿ ಸದಸ್ಯರಾದ ಸಲೀಂ ಖಾನ್ ಕುಡುಚಿ ಹಾಗೂ ಪದಾಧಿಕಾರಿ ಗಳು ಜೆಡಿಎಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕಾರಣಿ ಸಭೆಯಲ್ಲಿ ಕೆಲವು ವಿಚಾರಗಳ ಕುರಿತಂತೆ ಗಂಭೀರವಾಗಿ ಚರ್ಚೆಯನ್ನು ಮಾಡಿ ಮುಂಬರುವ ಚುನಾವಣೆಯ ಹಿನ್ನಲೆಯಲ್ಲಿ ಪಕ್ಷದ ಸಂಘಟನೆ ಸೇರಿದಂತೆ ಬೇರೆ ಬೇರೆ ವಿಚಾರಗಳ ಕುರಿತಂತೆ ಸಂಪೂರ್ಣವಾಗಿ ಕೆಳ ಮಟ್ಟದಲ್ಲಿ ಕೆಲಸವನ್ನು ಮಾಡುವಂತೆ ಸೂಚನೆಯನ್ನು ನೀಡಲಾಯಿತು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಲಿ.