This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

ಧಾರವಾಡ

ಪತಿಯ ಪರವಾಗಿ ಕಲಘಟಗಿ ಕ್ಷೇತ್ರದಲ್ಲಿ ಮುಂದುವರೆದ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಪ್ರವಾಸ – ಬಿ ಹೂಲಕಟ್ಟಿಯಲ್ಲಿ ಆಂಜನೇಯ ದೇವಸ್ಥಾನದಿಂದ ಮತ್ತೆ ಆರಂಭಗೊಂಡ ಕುಕ್ಕರ್ ವಿತರಣೆ ಅಪಾರ ಸಂಖ್ಯೆಯಲ್ಲಿ ಮಹಿಳೆಯರ ಬೆಂಬಲ

WhatsApp Group Join Now
Telegram Group Join Now

ಕಲಘಟಗಿ

ಇನ್ನೇನು ಮೂರು ನಾಲ್ಕು ತಿಂಗಳು ಕಳೆದರೆ ಸಾಕು ರಾಜ್ಯದಲ್ಲಿ ಸಾಮೂಹಿಕ ವಿಧಾನಸಭಾ ಚುನಾ ವಣೆಗಳು ನಡೆಯಲಿದ್ದು ಈಗಲೇ ಧಾರವಾಡದ ಕಲಘಟಗಿ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದಿಂದ ನಾಗರಾಜ ಛಬ್ಬಿ ಮತ್ತು ಅವರ ಪತ್ನಿ ಶ್ರೀಮತಿ ಜ್ಯೋತಿ ಛಬ್ಬಿ ಅವರು ಮಿಂಚಿನ ಸಂಚಾರವನ್ನು ಮಾಡುತ್ತಿದ್ದಾರೆ.

ಕಳೆದ ಒಂದೂವರೆ ತಿಂಗಳಿನಿಂದ ಕ್ಷೇತ್ರದಲ್ಲಿ ಬಿಡುವಿಲ್ಲದೇ ತಿರುಗಾಡುತ್ತಿದ್ದು ಇಂದು ಕ್ಷೇತ್ರದ ಬಿ ಹೂಲಿಕಟ್ಟಿ ಗ್ರಾಮದಲ್ಲಿ ಗ್ರಾಮಸ್ಥರೊಂದಿಗೆ ಸಭೆ ಯನ್ನು ಮಾಡಿ ಸಮಸ್ಯೆಗಳನ್ನು ಆಲಿಸಿದರು. ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಗ್ರಾಮಸ್ಥ ರೊಂದಿಗೆ ಸಭೆಯನ್ನು ಮಾಡಿ ಕೆಲ ಸಮಸ ಗ್ರಾಮ ದಲ್ಲಿನ ಸಮಸ್ಯೆಗಳನ್ನು ಆಲಿಸಿದರು ನಂತರ ಅವೆಲ್ಲವುಗಳನ್ನು ಬರುವ ದಿನಗಳಲ್ಲಿ ಈಡೇರಿ ಸುವ ಭರವಸೆಯನ್ನು ಗ್ರಾಮದ ಮಹಿಳೆಯರಿಗೆ ಮತ್ತು ಗ್ರಾಮಸ್ಥರಿಗೆ ನೀಡಿದರು.

ಇನ್ನೂ ಶನಿವಾರ ಹಿನ್ನಲೆಯಲ್ಲಿ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಮಾಡಿ ಕುಕ್ಕರ್ ವಿತರಣೆಗೆ ಚಾಲನೆ ನೀಡಿದರು.ಗ್ರಾಮದ ಪ್ರತಿ ಮನೆ ಮನೆಗೂ ತೆರಳಿ ಕುಕ್ಕರ್ ಗಳನ್ನು ವಿತರಣೆ ಮಾಡಿದರು.ಇದೇ ವೇಳೆ ಗ್ರಾಮದ ಪರವಾಗಿ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

 

ಈ ಒಂದು ಸಮಯದಲ್ಲಿ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅವರೊಂದಿಗೆ ವಿನೋದ ಛಬ್ಬಿ,ಸುನಂದಾ ಬಡಿಗೇರ,ಭಾರತಿ ಬದ್ದಿ, ಮಂಜುನಾಥ ಮೊರಬದ ಯೂಸೂಫ್ ಮೀಠಾಯಿಗಾರ,ಸಂಗಪ್ಪ ಮಕನಾಪೂರ,ಬಸು ಛಬ್ಬಿ,ಗದಿಗೆಪ್ಪ ಕಬನೂರ,ಬಸವರಾಜ ಕುಲಕರ್ಣಿ ಲಕ್ಕಪ್ಪ ಕೊಪ್ಪದ,ಯಲ್ಲಪ್ಪ ಹೊಸಮನಿ,ಪರಪ್ಪ ಮಿನಪ್ಪನವರ,ನಾಗರಾಜ ಕೋಟಿ,ಮುಗಪ್ಪ ತಡಸದ,ದಾವಲಸಾಬ ನಧಾಪ,ಬಸವರಾಜ ಹುನಗುಂದ ಸೇರಿದಂತೆ ಗ್ರಾಮದ ಗುರು ಹಿರಿ ಯರು ಗ್ರಾಮಸ್ಥರು ಯುವಕರು ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯ ಕ್ರಮವನ್ನು ಯಶಶ್ವಿಗೊಳಿಸಿ ಸಾಥ್ ನೀಡಿದರು.

ಸುದ್ದಿ ಸಂತೆ ನ್ಯೂಸ್ ಕಲಘಟಗಿ…..

ಪತಿಯ ಪರವಾಗಿ ಕಲಘಟಗಿ ಕ್ಷೇತ್ರದಲ್ಲಿ ಮುಂದುವರೆದ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಪ್ರವಾಸ – ಬಿ ಹೂಲಕಟ್ಟಿಯಲ್ಲಿ ಆಂಜನೇಯ ದೇವಸ್ಥಾನದಿಂದ ಮತ್ತೆ ಆರಂಭಗೊಂಡ ಕುಕ್ಕರ್ ವಿತರಣೆ ಅಪಾರ ಸಂಖ್ಯೆಯಲ್ಲಿ ಮಹಿಳೆಯರ ಬೆಂಬಲ

ಕಲಘಟಗಿ –

ಇನ್ನೇನು ಮೂರು ನಾಲ್ಕು ತಿಂಗಳು ಕಳೆದರೆ ಸಾಕು ರಾಜ್ಯದಲ್ಲಿ ಸಾಮೂಹಿಕ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು ಈಗಲೇ ಧಾರವಾಡದ ಕಲಘಟಗಿ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದಿಂದ ನಾಗರಾಜ ಛಬ್ಬಿ ಮತ್ತು ಅವರ ಪತ್ನಿ ಶ್ರೀಮತಿ ಜ್ಯೋತಿ ಛಬ್ಬಿ ಅವರು ಮಿಂಚಿನ ಸಂಚಾರವನ್ನು ಮಾಡುತ್ತಿದ್ದಾರೆ.ಕಳೆದ ಒಂದೂವರೆ ತಿಂಗಳಿನಿಂದ ಕ್ಷೇತ್ರದಲ್ಲಿ ಬಿಡುವಿಲ್ಲದೇ ತಿರುಗಾಡುತ್ತಿದ್ದು ಇಂದು ಕ್ಷೇತ್ರದ ಬಿ ಹೂಲಿಕಟ್ಟಿ ಗ್ರಾಮದಲ್ಲಿ ಗ್ರಾಮಸ್ಥರೊಂದಿಗೆ ಸಭೆಯನ್ನು ಮಾಡಿ ಸಮಸ್ಯೆಗಳನ್ನು ಆಲಿಸಿದರು.ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಗ್ರಾಮಸ್ಥರೊಂದಿಗೆ ಸಭೆಯನ್ನು ಮಾಡಿ ಕೆಲ ಸಮಸ ಗ್ರಾಮದಲ್ಲಿನ ಸಮಸ್ಯೆಗಳನ್ನು ಆಲಿಸಿದರು ನಂತರ ಅವೆಲ್ಲವುಗಳನ್ನು ಬರುವ ದಿನಗಳಲ್ಲಿ ಈಡೇರಿಸುವ ಭರವಸೆಯನ್ನು ಗ್ರಾಮದ ಮಹಿಳೆಯರಿಗೆ ಮತ್ತು ಗ್ರಾಮಸ್ಥರಿಗೆ ನೀಡಿದರು.ಇನ್ನೂ ಶನಿವಾರ ಹಿನ್ನಲೆಯಲ್ಲಿ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಮಾಡಿ ಕುಕ್ಕರ್ ವಿತರಣೆಗೆ ಚಾಲನೆ ನೀಡಿದರು.ಗ್ರಾಮದ ಪ್ರತಿ ಮನೆ ಮನೆಗೂ ತೆರಳಿ ಕುಕ್ಕರ್ ಗಳನ್ನು ವಿತರಣೆ ಮಾಡಿದರು.ಇದೇ ವೇಳೆ ಗ್ರಾಮದ ಪರವಾಗಿ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಒಂದು ಸಮಯದಲ್ಲಿ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅವರೊಂದಿಗೆ ವಿನೋದ ಛಬ್ಬಿ,ಸುನಂದಾ ಬಡಿಗೇರ,ಭಾರತಿ ಬದ್ದಿ,ಮಂಜುನಾಥ ಮೊರಬದ ಯೂಸೂಫ್ ಮೀಠಾಯಿಗಾರ,ಸಂಗಪ್ಪ ಮಕನಾಪೂರ,ಬಸು ಛಬ್ಬಿ,ಗದಿಗೆಪ್ಪ ಕಬನೂರ,ಬಸವರಾಜ ಕುಲಕರ್ಣಿ,ಲಕ್ಕಪ್ಪ ಕೊಪ್ಪದ,ಯಲ್ಲಪ್ಪ ಹೊಸಮನಿ,ಪರಪ್ಪ ಮಿನಪ್ಪನವರ,ನಾಗರಾಜ ಕೋಟಿ,ಮುಗಪ್ಪ ತಡಸದ,ದಾವಲಸಾಬ ನಧಾಪ,ಬಸವರಾಜ ಹುನಗುಂದ ಸೇರಿದಂತೆ ಗ್ರಾಮದ ಗುರು ಹಿರಿಯರು ಗ್ರಾಮಸ್ಥರು ಯುವಕರು ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಶ್ವಿಗೊಳಿಸಿ ಸಾಥ್ ನೀಡಿದರು.

ಸುದ್ದಿ ಸಂತೆ ನ್ಯೂಸ್ ಕಲಘಟಗಿ…..


Google News

 

 

WhatsApp Group Join Now
Telegram Group Join Now
Suddi Sante Desk