ಧಾರವಾಡ –
ಅಕ್ಟೋಬರ್ 16 ರಂದು ಮನಸೂರು ಗ್ರಾಮದಲ್ಲಿ ಸಚಿವ ಸಂತೋಷ ಲಾಡ್ ರಿಂದ ಸಾರ್ವಜನಿಕರ ಕುಂದುಕೊರತೆ ಸಮಸ್ಯೆ ಆಲಿಕೆ – ಗ್ರಾಮಕ್ಕೆ ಆಗಮಿಸುತ್ತಿರುವ ಸಚಿವರಿಗೆ ಗ್ರಾಮಸ್ಥರ ಪರ ವಾಗಿ ಸ್ವಾಗತ ಕೋರಿದ್ದಾರೆ ನಿಂಗಪ್ಪ ತೇಗೂರ
ಕಾರ್ಮಿಕ ಸಚಿವ ಸಂತೋಷ ಲಾಡ್ ಅಕ್ಟೋಬರ್ 10 ರಂದು ಧಾರವಾಡದ ಮನಸೂರು ಗ್ರಾಮಕ್ಕೆ ಆಗಮಿಸುತ್ತಿದ್ದಾರೆ.ಸಚಿವರಾದ ಮೇಲೆ ಮೊದಲ ಬಾರಿಗೆ ಈ ಒಂದು ಗ್ರಾಮಕ್ಕೆ ಸಚಿವ ಸಂತೋಷ್ ಲಾಡ್ ಆಗಮಿಸುತ್ತಿದ್ದಾರೆ.ಹೌದು ಧಾರವಾಡ ತಾಲ್ಲೂಕು ಮನಸೂರು ಗ್ರಾಮದ ಗ್ರಾಮ ಪಂಚಾ ಯತ ಭೇಟಿ ಮತ್ತು ಸಾರ್ವಜನಿಕರ ಕುಂದಕೊರ ತೆ ಗಳನ್ನು ಆಲಿಸಿ ವಿಚಾರಣೆಗೆ ಆಗಮಿಸುತ್ತಿದ್ದಾರೆ.
ಬೆಳಿಗ್ಗೆ 10 ಗಂಟೆಗೆ ಸಚಿವರು ಮನಸೂರು ಗ್ರಾಮಕ್ಕೆ ಆಗಮಿಸಿ ನಂತರ ಗ್ರಾಮ ಪಂಚಾಯತ ಗೆ ಭೇಟಿ ನೀಡಿ ನಂತರ ಸಾರ್ವಜನಿಕರಿಂದ ಸಮಸ್ಯೆಗಳನ್ನು ಆಲಿಸಲಿದ್ದಾರೆ.ಇನ್ನೂ ಗ್ರಾಮಕ್ಕೆ ಆಗಮಿಸುತ್ತಿರುವ ಸಚಿವ ಸಂತೋಷ ಲಾಡ್ ಮತ್ತು ಅಧಿಕಾರಿಗಳಿಗೆ ಹೃತ್ಪೂರ್ವಕ ಸ್ವಾಗತವನ್ನು ಗ್ರಾಮ ಪಂಚಾಯತ ಸದಸ್ಯರಾದ ನಿಂಗಪ್ಪ ಯಲ್ಲಪ್ಪ ತೇಗೂರ ಅವರು ಕೋರಿದ್ದಾರೆ.ಇನ್ನೂ ಇದೇ ವೇಳೆ ಪಂಚಾಯತ ವ್ಯಾಪ್ತಿಯಲ್ಲಿನ ಜನರು ಹೆಚ್ಚಿನ ಪ್ರಮಾಣದಲ್ಲಿ ಈ ಒಂದು ಸಚಿವರ ಕಾರ್ಯಕ್ರಮಕ್ಕೆ ಆಗಮಿಸಿ ಯಶಶ್ವಿಗೊಳಿಸುವಂ ತೆಯೂ ಕರೆ ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..