ಗರಗ –
ಗರಗ ನಲ್ಲಿ BJP ಯುವ ಮೋರ್ಚಾ ದಿಂದ ಮತದಾರರ ನೋಂದಣಿ ಕುರಿತಂತೆ ಜಾಗೃತಿ – ಜಿಲ್ಲಾಧ್ಯಕ್ಷರಿಗೆ ಸಾಥ್ ನೀಡಿದ ಶಂಕರ ಕೋಮಾರ ದೇಸಾಯಿ,ರುದ್ರಪ್ಪ ಅರಿವಾಳ ಮತ್ತು ಟೀಮ್
ಹೊಸದಾಗಿ ಆರಂಭಗೊಂಡಿರುವ ಮತದಾರರ ನೋಂದಣಿ ಕುರಿತಂತೆ ಧಾರವಾಡದ ಗರಗ ಗ್ರಾಮದಲ್ಲಿ ಬಿಜೆಪಿ ಯುವ ಮೋರ್ಚಾ ದಿಂದ ಜಾಗೃತಿಯನ್ನು ಮಾಡಲಾಯಿತು.ಹೌದು ಬಿಜೆಪಿ ಯುವ ಮೋರ್ಚಾ ಧಾರವಾಡ ಗ್ರಾಮಾಂತರ ಜಿಲ್ಲೆ ವತಿಯಿಂದ ಧಾರವಾಡ-71ರ ಯುವ ಮೋರ್ಚಾ ದಿಂದ ಧಾರವಾಡ ಗ್ರಾಮೀಣ ಮಂಡಲದ ಗರಗ ಗ್ರಾಮದ ಶ್ರೀ ಮಡಿವಾಳೇಶ್ವರ ಕರ್ತೃ ಗದ್ದುಗೆಯ ದರ್ಶನ ಪಡೆದು ನಂತರ ಚನ್ನಬಸವ ಕಲಾ ಹಾಗೂ ವಾಣಿಜ್ಯ ಪದವಿ ಪೂರ್ವ ಮತ್ತು ಪದವಿ ಮಹಾವಿದ್ಯಾಲಯದಲ್ಲಿ ಈ ಒಂದು ಕಾರ್ಯವನ್ನು ಮಾಡಲಾಯಿತು.
ಗರಗ ವಿದ್ಯಾರ್ಥಿಗಳಿಗೆ ಮೊಬೈಲ್ ಆ್ಯಪ್ ಮುಖಾಂತರ ಹೊಸ ಮತದಾರರ ನೋಂದಾ ವಣೆ ಮಾಡುವುದನ್ನು ತಿಳಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಕುಂದಗೋಳಮಠ,ಶಂಕರ ಕೋಮಾರದೇಸಾಯಿ ಮಂಡಲ ಅಧ್ಯಕ್ಷ ರುದ್ರಪ್ಪ ಅರಿವಾಳ,ಯುವ ಮೋರ್ಚಾ ಅಧ್ಯಕ್ಷರಾದ ಯಲ್ಲಪ್ಪ ಜಾನಕೂನ ವರ,ಸಿದ್ದನಗೌಡ ಪಾಟೀಲ,ರಾಕೇಶ ಹಿರೇಮಠ, ಮಂಜುನಾಥ್ ಯಾಬ್ಬಣನವರ,ವೆಂಕು ಯಾಲಿ ಗಾರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಅನಿಲಕುಮಾರ ಉಳವನ್ನವರ ಸುದ್ದಿ ಸಂತೆ ನ್ಯೂಸ್ ಗರಗ.