ಹುಬ್ಬಳ್ಳಿ –
ಕಬ್ಬು ತುಂಬಿದ್ದ ಲಾರಿ ಮೈಮೇಲೆ ಹರಿದು ಬೈಕ್ ಸವಾರ ಸಾವಿಗೀಡಾದ ಘಟನೆ ಕಲಘಟಗಿ ಯಲ್ಲಿ ನಡೆದಿದೆ.ಕಲಘಟಗಿ ಪಟ್ಟಣದ ಅರ್ಬನ್ ಬ್ಯಾಂಕ್ ಬಳಿ ಈ ಒಂದು ಅಪಘಾತ ನಡೆದಿದೆ. ಫೋಟೋಗ್ರಾಫರ್ ಬಸವರಾಜ್ ಕಲ್ಲೇದ್ (48) ಮೃತ ಬೈಕ್ ಸವಾರನಾಗಿದ್ದಾನೆ.
ಬೈಕ್ ಸ್ಕಿಡ್ ಆಗಿ ಲಾರಿ ಅಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಬಸವರಾಜ್.ಧಾರವಾಡ ಜಿಲ್ಲೆಯ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂತೆ ನ್ಯೂಸ್ ಕಲಘಟಗಿ…..