ಧಾರವಾಡ –
ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಮಟ್ಟದ ಗ್ರಾಮೀಣ ಶಿಕ್ಷಕ ರತ್ನ ಪ್ರಶಸ್ತಿಗೆ ಶಿಕ್ಷಕಿ ಶ್ರೀಮತಿ ಹನಮವ್ವ ಬಿ ಕೊಡೆಕಲ್ ಅವರು ಆಯ್ಕೆ ಯಾಗಿದ್ದಾರೆ.ಕೊಪ್ಪಳ ದ ಕುಷ್ಟಗಿಯ ದೋಟಿಹಾಳ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ಮಾಡುತ್ತಿದ್ದು ಈ ವರ್ಷದ ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ
ಹೌದು ಶ್ರೀಮತಿ ಹನಮವ್ವ ಶಿಕ್ಷಕಿಯರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ದೋಟಿಹಾಳ ತಾಲ್ಲೂಕು ಕುಷ್ಟಗಿ ಜಿಲ್ಲಾ ಕೊಪ್ಪಳ ಇವರು ಹತ್ತೊಂಬತ್ತು ವರ್ಷಗಳ ಕಾಲ ಗ್ರಾಮೀಣ ಪ್ರದೇಶದಲ್ಲಿ ಸೇವೆಯನ್ನು ಸಲ್ಲಿಸಿದ ಹಾಗೂ ವಿಜ್ಞಾನ ವಸ್ತುಪ್ರದರ್ಶನದಲ್ಲಿ ರಾಜ್ಯ ಮಟ್ಟದವರೆಗೆ ತಮ್ಮ ಶಾಲೆಯ ಮಕ್ಕಳನ್ನು ಭಾಗವಹಿಸಿದ್ದು ಮೇಲಾಧಿಕಾರಿಗ ಳಿಂದ ಉತ್ತಮ ಮೆಚ್ಚುಗೆ ಪಾತ್ರರಾಗಿದ್ದಾರೆ.ಇವರ ಸೇವೆ ಯನ್ನು ಪರಿಗಣಿಸಿ ರಾಜ್ಯಮಟ್ಟದ ಗ್ರಾಮೀಣ ಶಿಕ್ಷಕ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ
ದಿನಾಂಕ 25-12-2021 ರಂದು ಸದ್ಗುರು ಸಿದ್ಧಾರೂಢ ಮಠ ಹುಬ್ಬಳ್ಳಿ ಸಭಾಭವನದಲ್ಲಿ ನಡಿಯುವ ಈ ಕಾರ್ಯ ಕ್ರಮದಲ್ಲಿ ಪ್ರಶಸ್ತಿಯನ್ನು ನೀಡುತ್ತಿರುವ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ ಹುಬ್ಬಳ್ಳಿ ರಾಜ್ಯಾಧ್ಯಕ್ಷ ಅಶೋಕ್ ಸಜ್ಜನ ಪ್ರಧಾನ ಕಾರ್ಯ ದರ್ಶಿಗಳಾದ ಮಲ್ಲಿಕಾರ್ಜುನ್ ಉಪ್ಪಿನ್ ಗೌರವಧ್ಯಕ್ಷರಾದ ಎಲ್ ಐ ಲಕ್ಕಮ್ಮನವರ ಕಾರ್ಯಾಧ್ಯಕ್ಷರಾದ ಶರಣಪ್ಪ ಗೌಡ ಪಾಟೀಲ್
ಮಹಾ ಪೋಷಕರಾದ ಪವಾಡೆಪ್ಪ ಕಲಬುರಗಿ ವಿಭಾಗೀಯ ಸಂಚಾಲಕರಾದ ಹನುಮಂತಪ್ಪ ಮೇಟಿ ಬೆಳಗಾವಿ ವಿಭಾಗೀಯ ಸಂಚಾಲಕರಾದ ಅಕ್ಬರಲಿ ಸೊಲ್ಲಾಪುರ ಹಾಗೂ ಸಂಘದ ರಾಜ್ಯ ಸಹ ಕಾರ್ಯದರ್ಶಿ ಶರಣಬಸವ ಬನ್ನಿಗೇೂಳ ಇವರೆಲ್ಲರಿಗೂ ನನ್ನ ಗ್ರಾಮೀಣ ಪ್ರದೇಶದ ಸೇವೆಯನ್ನು ಪರಿಗಣಿಸಿ ರಾಜ್ಯ ಮಟ್ಟದ ಗ್ರಾಮೀಣ ಶಿಕ್ಷಕರ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದಕ್ಕೆ ಅಭಿನಂದನೆಗಳನ್ನು ಶಿಕ್ಷಕಿಯವರು ಹೇಳಿದ್ದಾರೆ.