ಸವದತ್ತಿ –
ಬೈಕ್ ವೊಂದು ನಿಯಂತ್ರಣ ತಪ್ಪಿ ಬಿದ್ದು ಇಬ್ಬರು ಸಾವಿಗೀಡಾದ ಘಟನೆ ರಾಮದುರ್ಗ ದ ಮುಳ್ಳೂರು ಘಾಟ ನಲ್ಲಿ ನಡೆದಿದೆ.ರಾಮದುರ್ಗ ದಿಂದ ಸವದತ್ತಿ ಕಡೆಗೆ ಬರುವಾಗ ನಿಯಂತ್ರಣ ತಪ್ಪಿ ತಡೆಗೋಡೆ ಗೆ ಬಡಿದು ಅಲ್ಲಿಂದ ಕೆಳಗೆ ಬಿದ್ದಿದ್ದಾರೆ
ಮೃತರು ಇನಾಂಹೊಂಗಲದ ರವಿ ಮತ್ತು ಮಂಜು ಎಂಬುವರಾಗಿದ್ದಾರೆ.ಊರಿನಿಂದ ರಾಮದುರ್ಗ ಗೆ ಹೋಗಿ ಮರಳಿ ಬರುವಾಗ ಈ ಒಂದು ಅಪಘಾತ ಸಂಭವಿಸಿದೆ.
ರಾಮದುರ್ಗ ದಿಂದ ಸವದತ್ತಿ ಕಡೆಗೆ ಬರುವ ಸಮಯದಲ್ಲಿ ಇಳಿಯುವಾಗ ನಿಯಂತ್ರಣ ತಪ್ಪಿ ತಡೆಗೋಡೆ ಗೆ ಡಿಕ್ಕಿ ಹೊಡೆದು ನಂತರ ಕೆಳಗೆ ಬಿದ್ದಿದ್ದಾರೆ.
ಸಾಕಷ್ಟು ಪ್ರಮಾಣದಲ್ಲಿ ಕಲ್ಲು ಇದ್ದುದರಿಂದ ಮುಖ ಮತ್ತು ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವಿಗೀಡಾಗಿ ದ್ದಾರೆ.ಇನ್ನೂ ಸುದ್ದಿ ತಿಳಿದ ರಾಮದುರ್ಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.