ಧಾರವಾಡ –
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಧಾರವಾಡ ದಲ್ಲಿ ವಿಶೇಷ ಪೂಜೆ ಯನ್ನು ಮಾಡಲಾಯಿತು ಹೌದು ಕೇಂದ್ರ ಕಲ್ಲಿದ್ದಲು,ಗಣಿ ಹಾಗೂ ಸಂಸದೀಯ ವ್ಯವಹಾರ ಗಳ ಸಚಿವರಾದ ಪ್ರಹ್ಲಾದ ಜೋಶಿ ರವರ ಜನ್ಮದಿನದ ಅಂಗವಾಗಿ ಧಾರವಾಡದ ಲಕ್ಷ್ಮಿ ನರಸಿಂಹ ದೇವಸ್ಥಾನದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೌರರಾದ ಈರೇಶ ಅಂಚಟಗೇರಿ ನೇತೃತ್ವದಲ್ಲಿ ವಿಶೇಷ ಪೂಜೆ ಮಾಡಲಾಯಿತು
ಪ್ರಹ್ಲಾದ ಜೋಶಿ ರವರಿಗೆ ಆಯಸ್ಸು ಆರೋಗ್ಯ ವೃದ್ಧಿಯಾಗಿ ಇನ್ನೂ ಹೆಚ್ಚಿನ ಜನಸೇವೆ ಮಾಡಲು ಶಕ್ತಿ ನೀಡಲಿ ಎಂದು ವಿಶೇಷ ಪೂಜೆಯನ್ನು ಮೇಯರ್ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಮುಖಂಡರು ಪೂಜೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಸುರೇಶ್ ಬೆದರೇರವರು, ಭಾರತೀಯ ಜನತಾ ಪಕ್ಷದ ಪದಾಧಿಕಾರಿಗಳಾದ ಈರಣ್ಣ ಹಪ್ಪಳಿರವರು, ಟಿ ಎಸ್ ಪಾಟೀಲ್ ರವರು, ಶ್ರೀ ರಘು ತೆರದಾಳರ ವರು, ಸಿದ್ದು ಕಲ್ಯಾಣಶೆಟ್ಟಿರವರು, ಬಸವರಾಜ ರುದ್ರಾಪುರ ರವರು, ಮಂಜುನಾಥ ಕಮ್ಮಾರ ರವರು, ವೀರೇಶ್ ಹಿರೇಮಠ ರವರು, ಶ್ರೀನಿವಾಸ ಕೋಟ್ಯಾನ್ ರವರು ಹಾಗೂ ಅನೇಕ ಪ್ರಮುಖರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್…..