ಅಣ್ಣಿಗೇರಿ –
ಹತ್ತಿ ತುಂಬುವ ಯಂತ್ರವೊಂದು ಬಡಿದು ಮಹಿಳೆಯೊಬ್ಬಳು ಸಾವಿಗೀಡಾದ ಘಟನೆ ಧಾರವಾಡದ ಅಣ್ಣಿಗೇರಿಯಲ್ಲಿ ನಡೆದಿದೆ.

ಅಣ್ಣಿಗೇರಿ ಪಟ್ಟಣದ ಸಹಕಾರಿ ಸಂಘದ ಗುಡಾನ್ ನಲ್ಲಿ ಈ ಒಂದು ಘಟನೆ ನಡೆದಿದೆ. ಸುಜಾತ ಹನಮಂತಪ್ಪ ಮೃತ ಮಹಿಳೆಯಾಗಿದ್ದಾಳೆ. ಎಂದಿನಂತೆ ಕೆಲಸಕ್ಕೆ ಬಂದ ಮಹಿಳೆ ಗುಡಾನ್ ನಲ್ಲಿ ಹತ್ತಿ ತುಂಬುತ್ತಿದ್ದರು ಒಂದು ಕಡೆ ನಿಂತುಕೊಂಡಿದ್ದರು ಈ ಒಂದು ಸಮಯದಲ್ಲಿ ಟ್ರಾಕ್ಟರ್ ನ್ನು ಚಾಲಕ ಹಿಂದೆ ತಗೆದುಕೊಂಡಿದ್ದಾರೆ.

ಹಿಂದೆ ತಗೆದುಕೊಂಡ ಸಮಯದಲ್ಲಿ ಮಹಿಳೆಯ ತಲೆಗೆ ಜೋರಾಗಿ ಬಡಿದಿದ್ದು ತಲೆ ಹೊಡೆದು ಸ್ಥಳದಲ್ಲೇ ಮಹಿಳೆ ಸಾವಿಗೀಡಾಗಿದ್ದಾರೆ. ಇನ್ನೂ ಚಾಲಕನ ನಿರ್ಲಕ್ಷ್ಯ ದಿಂದಾಗಿ ಈ ಒಂದು ಘಟನೆ ನಡೆದಿದ್ದು ವಿಷಯ ತಿಳಿದ ಅಣ್ಣಿಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
