ಕಲಘಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ಮುಂದುವರಿದ ಛಬ್ಬಿ ದಂಪತಿಗಳ ಅಬ್ಬರದ ಸಂಚಾರ ಕ್ಷೇತ್ರದ ಮನೆ ಮನೆಗೂ ವಿತರಣೆಯಾಗುತ್ತಿವೆ ಕುಕ್ಕರ್ ಬಿಡುವಿಲ್ಲದೇ ಬೆಂಬಲಿಗರು ಆಪ್ತರೊಂದಿಗೆ ಸುತ್ತಾಡುತ್ತಿದ್ದಾರೆ ಛಬ್ಬಿ ದಂಪತಿಗಳು

Suddi Sante Desk
ಕಲಘಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ಮುಂದುವರಿದ ಛಬ್ಬಿ ದಂಪತಿಗಳ ಅಬ್ಬರದ ಸಂಚಾರ ಕ್ಷೇತ್ರದ ಮನೆ ಮನೆಗೂ ವಿತರಣೆಯಾಗುತ್ತಿವೆ ಕುಕ್ಕರ್ ಬಿಡುವಿಲ್ಲದೇ ಬೆಂಬಲಿಗರು ಆಪ್ತರೊಂದಿಗೆ ಸುತ್ತಾಡುತ್ತಿದ್ದಾರೆ ಛಬ್ಬಿ ದಂಪತಿಗಳು

ಧಾರವಾಡ-

ಇನ್ನೇನು ಚುನಾವಣೆ ಗೆ ದಿನಾಂಕ ಸಮೀಪಿಸುತ್ತಿ ದ್ದಂತೆ ರಾಜಕೀಯ ಪಕ್ಷಗಳು ಅಬ್ಬರ ಪ್ರಚಾರ ಆರಂಭಗೊಂಡಿದ್ದು ಇದರ ನಡುವೆ ಇತ್ತ.            ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಪತ್ನಿ ಜ್ಯೋತಿ ನಾಗರಾಜ್ ಛಬ್ಬಿ ಮತ್ತು ಬೆಂಬಲಿಗರ ಸುತ್ತಾಟ ಬಲು ಜೋರಾಗಿದೆ.

ಹೌದು ಕಳೆದ ಕೆಲ ದಿನಗಳಿಂದ ಕ್ಷೇತ್ರದಲ್ಲಿ ಛಬ್ಬಿ ದಂಪತಿಗಳು ವಾಸ್ತವ್ಯ ಹೂಡಿದ್ದು ಕಾಲಿಗೆ ಚಕ್ರ ವನ್ನು ಕಟ್ಟಿಕೊಂಡವರಂತೆ ದಂಪತಿಗಳು ತಮ್ಮ ತಮ್ಮ ಬೆಂಬಲಿಗರು ಆಪ್ತರೊಂದಿಗೆ ಕ್ಷೇತ್ರದಲ್ಲಿ ತಿರುಗಾಡುತ್ತಿದ್ದಾರೆ.ಇನ್ನೂ ಹೋದಲ್ಲೇಲ್ಲ ಕಲಘಟಗಿ ಕ್ಷೇತ್ರದಲ್ಲಿ ಛಬ್ಬಿ ಪರ ಅಲೆ ಜನರ ಅಪಾರ ಬೆಂಬಲ ಪತಿ ಪರವಾಗಿ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಮಿಂಚಿನ ಸಂಚಾರದ ಚಿತ್ರಣವೇ ಕ್ಷೇತ್ರದ ಎಲ್ಲೇಡೆ ಕಂಡು ಬರುತ್ತಿದೆ.

ಚುನಾವಣೆಯ ಮುನ್ನವೇ ಧಾರವಾಡ ಜಿಲ್ಲೆ ಯಲ್ಲಿ ಚುನಾವಣೆಯ ಅಬ್ಬರ ಜೋರಾಗಿದ್ದು ನಾ ಮುಂದು ನೀ ಮುಂದು ಎನ್ನುತ್ತಾ ಈಗಲೇ ಕ್ಷೇತ್ರ ದಲ್ಲಿ ಕಾಂಗ್ರೇಸ್ ಪಕ್ಷದಿಂದ ನಾಗರಾಜ ಛಬ್ಬಿ ಮತ್ತು ಟೀಮ್ ನವರು ಪ್ರಚಾರದೊಂದಿಗೆ ಮತದಾರರ ಸಮಸ್ಯೆ ಆಲಿಸುತ್ತಿದ್ದಾರೆ.ಹೌದು ಮಾಜಿ ವಿಧಾನ ಪರಿಷತ್ ಸದಸ್ಯ ಕಾಂಗ್ರೇಸ್ ಪಕ್ಷದ ಮುಖಂಡ ಯುವ ನಾಯಕ ನಾಗರಾಜ್ ಛಬ್ಬಿ ಅವರು ಈಗಾಗಲೇ ಬಿಡುವಿಲ್ಲದೇ ಕಲ ಘಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ತಮ್ಮ ಬೆಂಬಲಿ ಗರೊಂದಿಗೆ ಬಿಡುವಿಲ್ಲದೇ ಸುತ್ತಾಡುತ್ತಾ ಪ್ರವಾಸವನ್ನು ಮಾಡುತ್ತಿದ್ದಾರೆ.

ಸಾಲದಂತೆ ಎಲ್ಲೇಂದರಲ್ಲಿ ಸಭೆ ಸಮಾರಂಭ ಮಾಡುತ್ತಾ ಜನರ ಸಂಕಷ್ಟಗಳನ್ನು ಆಲಿಸುತ್ತಿರು ವುದು ಕಂಡು ಬರುತ್ತಿದ್ದು ಸಮಸ್ಯೆ ಆಲಿಸುವುದ ರೊಂದಿಗೆ ಅಲ್ಲೇ ಪರಿಹಾರವನ್ನು ಕೂಡಾ ನೀಡುತ್ತಾ ಸಾರ್ವಜನಿಕರ ಕಣ್ಣೀರು ಒರೆಸುತ್ತಾ ನೆರವಾಗುತ್ತಿದ್ದಾರೆ ಇದರೊಂದಿಗೆ ಚುನಾವಣೆಯ ಮುನ್ನವೇ ಕ್ಷೇತ್ರದಲ್ಲಿ ಬಿಡು ಬಿಟ್ಟಿದ್ದು ಬೆಂಬಲಿಗ ರೊಂದಿಗೆ ಸುತ್ತಾಡುತ್ತಿದ್ದಾರೆ.

ಇನ್ನೂ ಪತಿಯ ಪರವಾಗಿ ಇವರ ಪತ್ನಿ ಜ್ಯೋತಿ ನಾಗರಾಜ ಛಬ್ಬಿ ಅಖಾಡಕ್ಕಿಳಿದಿದ್ದಾರೆ.ಕ್ಷೇತ್ರದ ಹಲವು ಗ್ರಾಮಗಳಲ್ಲಿ ಈಗಲೇ ಅವರು ಕೂಡಾ ತಮ್ಮ ಬೆಂಬಲಿಗರೊಂದಿಗೆ ಪಕ್ಷಕ ಕಾರ್ಯಕರ್ತ ರು ಮಹಿಳಾ ಮುಖಂಡರೊಂದಿಗೆ ಅಲ್ಲಲ್ಲಿ ಸಭೆ ಸಮಾರಂಭಗಳನ್ನು ಮಾಡುತ್ತಾ ಇವರು ಕೂಡಾ ಮಹಿಳೆಯರ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ.

ಪ್ರತಿ ಮನೆಗೂ ತೆರಳಿ ಸಮಸ್ಯೆ ಸಂಕಷ್ಟ ಗಳನ್ನು ಆಲಿಸಿ ಪ್ರತಿಯೊಂದು ಕುಟುಂಬಕ್ಕೂ ಒಂದೊಂದು ಕುಕ್ಕರ್ ಗಳನ್ನು ಪ್ರೀತಿಯಿಂದ ನೀಡುತ್ತಿದ್ದಾರೆ. ಪ್ರತಿ ಮನೆ ಮನೆಗೂ ತೆರಳಿ ನಿಮ್ಮ ಯಾವುದೇ ಸಮಸ್ಯೆ ಸಂಕಷ್ಟ ಗೆ ಸದಾ ಕಾಲವೂ ನಾವು ನಮ್ಮ ಟೀಮ್  ನಿಂತುಕೊಳ್ಳಲಿದ್ದಾರೆ ಎಂಬ ಭರವಸೆಯ ಮಾತುಗಳನ್ನು  ಹೇಳುತ್ತಾ ಜ್ಯೋತಿ ನಾಗರಾಜ ಛಬ್ಬಿ ಅವರು ತಮ್ಮ ಬೆಂಬಲಿ ಗರೊಂದಿಗೆ ಈ ಒಂದು ಕಾರ್ಯದಲ್ಲಿ ತೊಡಗಿ ಕೊಂಡಿದ್ದಾರೆ.

ಕ್ಷೇತ್ರದ ಬೆಂಡಲಕಟ್ಟಿ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆಯನ್ನು ಮಾಡಿ ಸಾರ್ಜಜನಿಕರು ಮತ್ತು ಮಹಿಳೆಯೊಂದಿಗೆ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅವರು ಸಭೆಯನ್ನು ಮಾಡಿದರು.ಕೆಲವೊತ್ತು ಸಮಸ್ಯೆ ಗಳನ್ನು ಆಲಿಸಿ ನಂತರ ಪರಿಹಾರದ ಭರವಸೆ ಯನ್ನು ನೀಡಿದರು. ಇನ್ನೂ ಇವರು ಕ್ಷೇತ್ರದಲ್ಲಿ ಹೋದಲ್ಲೇಲ್ಲ ಅಭೂತಪೂರ್ಣವಾದ ಜನಬೆಂ ಬಲ ಪ್ರೀತಿಯ ಅಕ್ಕರೆಯ ಬೆಂಬಲ ಕಂಡು ಬರುತ್ತಿದ್ದು ಇವರೊಂದಿಗೆ ಸಾಕಷ್ಟು ಒಲವು ಕಂಡು ಬರುತ್ತಿರುವುದು ಕಂಡು ಬರುತ್ತಿದ್ದು ಇದರೊಂದಿಗೆ ಈ ಒಂದು ಸಮಯದಲ್ಲಿ ಜ್ಯೋತಿ ನಾಗರಾಜ ಛಬ್ಬಿ ಅವರೊಂದಿಗೆ ಅನಂತ ದೇಶಪಾಂಡೆ, ಷಣ್ಮುಖ ಗದಗಿನ,ಪುಂಡಲೀಕ ಧಡೇದ,ಯಲ್ಲಪ್ಪ ಲಮಾಣಿ,ಗಿರಿಮಚ್ಚಯ್ಯ ಅಂಗಡಿ,ಶಿವು ಚಿನ್ನಗುಡಿ,ಸುನಂದಾ ಬಡಿಗೇರ,ಮಂಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.